- Advertisement -
- Advertisement -
ಕುಂದಾಪುರ: ಟ್ರ್ಯಾಕ್ಟರ್ನಲ್ಲಿ ಗದ್ದೆ ಉಳುತ್ತಿದ್ದಾಗಲೇ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ದೀಟಿಯಲ್ಲಿ ನಡೆದಿದೆ.
ಹರಿಹರ ಮೂಲದ ಟ್ರ್ಯಾಕ್ಟರ್ ಚಾಲಕ ರಾಜು ಎಂಬುವವರೇ ಮೃತಪಟ್ಟವರು. ದೀಟಿ ಗ್ರಾಮದ ಗದ್ದೆಯಲ್ಲಿ ಉಳುತ್ತಿದ್ದಾಗ ಹೃದಯಾಘಾತವಾಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ ರಾಜು ಬದುಕಲಿಲ್ಲ.
- Advertisement -