Thursday, May 2, 2024
Homeಕರಾವಳಿಧರ್ಮಸ್ಥಳ : ಥಾರ್ ಜೀಪ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪ್ರಕರಣ:ವಾಹನದಲ್ಲಿದ್ದ ಓರ್ವ ಚಿಕಿತ್ಸೆ ಫಲಿಸದೆ ಸಾವು

ಧರ್ಮಸ್ಥಳ : ಥಾರ್ ಜೀಪ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪ್ರಕರಣ:ವಾಹನದಲ್ಲಿದ್ದ ಓರ್ವ ಚಿಕಿತ್ಸೆ ಫಲಿಸದೆ ಸಾವು

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸುತ್ತಿರುವ ವೇಳೆ ನಿಯಂತ್ರಣ ತಪ್ಪಿ ಥಾರ್ ಜೀಪು ನದಿಯ ಪಕ್ಕದ ಹೊಂಡಕ್ಕೆ ಪಲ್ಟಿಯಾಗಿದ್ದ ಪ್ರಕರಣ ಸಂಬಂಧ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕುದ್ರಾಯ ಎಂಬಲ್ಲಿ ಫೆ.11 ರಂದು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಅಗಮಿಸುತ್ತಿದ್ದಾಗ ಬೆಳಗ್ಗೆ 5:30 ಕ್ಕೆ ಥಾರ್ ಜೀಪ್ KA-01-MY-4657 ನಿಯಂತ್ರಣ ತಪ್ಪಿ ನದಿಯ ಬದಿಯ ಹೊಂಡಕ್ಕೆ ಬಿದ್ದಿತ್ತು.ಬೆಂಗಳೂರು ಹೊಸಕೋಟೆಯ ಅನ್ನಪೂರ್ಣೇಶ್ವರಿ ನಗರದ 5 ನೇ ಕ್ರಾಸ್ ನ ಪತಿ ಅರುಣ್ ಕುಮಾರ್(31), ಪತ್ನಿ ನಂದಿನಿ(24) ಹಾಗೂ ನಂದಿನಿಯ  ತಮ್ಮ ಚಾಲಕ ಚಂದ್ರಶೇಖರ್ ಥಾರ್ ಜೀಪು ವಾಹನದಲ್ಲಿದ್ದರು.

ಚಾಲಕ ಚಂದ್ರಶೇಖರ್ ಗೆ ಯಾವುದೇ ಗಾಯವಾಗಿರಲಿಲ್ಲ‌. ಪತ್ನಿ ನಂದಿನಿ(24) ಗೆ ಕಾಲಿಗೆ ಸಣ್ಣಪುಟ್ಟ ಗಾಯವಾಗಿತ್ತು. ಪತಿ ಅರುಣ್ ಕುಮಾರ್ ಗೆ ಕುತ್ತಿಗೆಗೆ ಗಂಭೀರ ಗಾಯವಾಗಿ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ನಂತರ ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಿದಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ನಂದಿನಿ ಪತಿ ಅರುಣ್ ಕುಮಾರ್(31) ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಂದಿನಿಯ ತಮ್ಮ ಚಾಲಕ ಚಂದ್ರಶೇಖರ್ ಮೇಲೆ ಅಜಾಗರೂಕತೆಯಿಂದ ಚಾಲನೆಯಿಂದ ಅಪಘಾತ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!