- Advertisement -
- Advertisement -
ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮತ್ತೊಂದು ಯಡವಟ್ಟು ಬಯಲಾಗಿದೆ. 7ನೇ ತರಗತಿಯ ಕನ್ನಡ ಭಾಷೆಯ ಶಾಲಾ ಪಠ್ಯದಲ್ಲಿ ಗೊಂಬೆ ಕಲಿಸುವ ನೀತಿ ಪಾಠದ ಮೂಲ ಕವಿಯ ಹೆಸರನ್ನೇ ಬದಲಾಯಿಸಲಾಗಿದೆ.
ಗೊಂಬೆ ಕಲಿಸುವ ನೀತಿ ಪಾಠದ ಕವಿ ಪರಿಚಯದ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದ ಗೊಂಬೆ ಹಾಡನ್ನು, ಚಿ.ಉದಯ ಶಂಕರ್ ಬರೆದಿದ್ದಾರೆ ಎನ್ನುವ ಬದಲಾಗಿ, ಆರ್ ಎನ್ ಜಯಗೋಪಾಲ್ ಬರೆದಿದ್ದಾರೆ ಎಂಬುದಾಗಿ ಚಿರುಚಲಾಗಿದೆ. ಈ ಮೂಲಕ ರೋಹಿತ್ ಚಕ್ರತೀರ್ಥ ಸಮಿತಿಯು ಜಸ್ಟ್ ಸರಿಯೋ ತಪ್ಪೋ ಕ್ರಾಸ್ ಚೆಕ್ ಮಾಡದೇ ಚಿ ಉದಯಶಂಕರ್ ಹಾಡನ್ನು ಆರ್ ಎನ್ ಜಯಗೋಪಾಲ್ ಬರೆದಿದ್ದಾರೆ ಎಂದು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.
- Advertisement -