ಪುತ್ತೂರು : ಹಿಂದೂ ಯುವತಿಯೊಬ್ಬಳು ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಇದ್ದಾಳೆಂಬ ಸಂದೇಹದ ಮೇರೆಗೆ ಯುವಕನ ಮನೆ ಮುಂದೆ ಸಾರ್ವಜನಿಕರು ಜಮಾಯಿಸಿದ ಘಟನೆ ಕೊಳಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿ ಸೆ.29 ರಂದು ನಡೆದಿದೆ.
ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅನ್ಯಕೋಮಿನ ಯುವಕನೋರ್ವನ ಮನೆ ಮುಂದೆ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ಅರಿತ ಬೆಳ್ಳಾರೆ ಪೊಲೀಸರು ಮನೆಗೆ ಆಗಮಿಸಿದಾಗ ಒಂದು ಗಂಟೆಗಳ ಕಾಲ ಬಾಗಿಲು ತೆಗೆಯದೆ ಸತಾಯಿಸುತ್ತಿದ್ದ ಯುವಕ, ನಂತರ ಬಾಗಿಲು ತೆಗೆದಿದ್ದು ಮನೆಯೊಳಗೆ ಹುಡುಕಾಡಿದಾಗ ಯುವತಿ ಮನೆಯಲ್ಲಿ ಇರಲಿಲ್ಲ.ಯುವತಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಆದರೆ ಪೊಲೀಸರು ಮನೆಯೊಳಗೆ ಹುಡುಕಾಡಿದಾಗ ಸಿಗದ ಯುವತಿ ಗೋಡ್ರೆಜ್ನಲ್ಲಿ ಅಡಗಿ ಕೂತಿದ್ದಳು ಎನ್ನಲಾಗಿದೆ. ಜನರೆಲ್ಲ ಸ್ಥಳದಿಂದ ತೆರಳಿದ ಬಳಿಕ ಯುವತಿಯನ್ನು ಜಾಲ್ಲೂರಿನಲ್ಲಿ ಬಿಟ್ಟು ಬಂದಿದ್ದು ಯುವತಿಯನ್ನು ಕೆಲವರು ಪ್ರಶ್ನಿಸಿದಾಗ ನಡೆದ ಘಟನೆ ವಿವರಿಸಿ ಗೋಡ್ರೆಜ್ನಲ್ಲಿ ಅಡಗಿ ಕೂತ ಬಗ್ಗೆ ತಿಳಿಸಿದ್ದಾಳೆ ಎಂದು ಹೇಳಲಾಗಿದೆ.
ಯುವಕ ದೇಲಂಪಾಡಿ ಕಡೆ ಕೆಲಸಕ್ಕೆ ತೆರಳುತ್ತಿದ್ದು,ಅಲ್ಲೇ ಯುವತಿ ಕೂಡ ಕೆಲಸಕ್ಕಿದ್ದಳು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆಗೆ ಕರೆ ತಂದಿದ್ದಾನೆ ಎನ್ನಲಾಗಿದೆ. ಇದೀಗ ಯುವಕ ಮತ್ತು ಯುವತಿ ಪೊಲೀಸರ ವಶದಲ್ಲಿ ಇದ್ದಾರೆ ಎನ್ನಲಾಗಿದೆ.
ಮಾನ ಇದೆ ಎಂದರು.