Monday, May 6, 2024
Homeಪ್ರಮುಖ-ಸುದ್ದಿಮುಂಬೈ: ವಿಲೆ ಪಾರ್ಲೆ ಚಿತಾಗಾರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್​ ಅಂತ್ಯಕ್ರಿಯೆ

ಮುಂಬೈ: ವಿಲೆ ಪಾರ್ಲೆ ಚಿತಾಗಾರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್​ ಅಂತ್ಯಕ್ರಿಯೆ

spot_img
- Advertisement -
- Advertisement -

ಮುಂಬೈ: ನಿನ್ನೆ ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಿವುಡ್‍ನ ಎಂ.ಎಸ್ ಧೋನಿ ಎಂದೇ ಹೆಸರಾಗಿದ್ದ ನಟ ಸುಶಾಂತ್‍ಸಿಂಗ್ ರಜಪೂತ್ ಅಂತ್ಯಸಂಸ್ಕಾರ ಮುಂಬೈನಲ್ಲಿ ನಡೆಯಿತು. ಮುಂಬೈನ ವಿಲ್ಲೆ ಪಾರ್ಲೆ ಪ್ರದೇಶದಲ್ಲಿರುವ ಪವನ್ ಹನ್ಸ್ ಚಿತಾಗಾರದಲ್ಲಿ ಸುಶಾಂತ್ ಅಂತ್ಯಸಂಸ್ಕಾರ ನಡೆಸಲಾಯಿತು.

ಈ ಸಂಧರ್ಭದಲ್ಲಿ ಸುಶಾಂತ್ ತಂದೆ, ತಾಯಿ, ಸಹೋದರಿ ಹಾಗೂ ಕುಟುಂಬ ಸದಸ್ಯರ ಜತೆಗೆ ಬಾಲಿವುಡ್​ನ ಕೆಲವು ಜನಪ್ರಿಯ ಸೆಲೆಬ್ರಿಟಿಗಳು ಸಹ ಹಾಜರಿದ್ದರು. ನಟಿಯರಾದ ಶ್ರದ್ಧಾ ಕಪೂರ್​, ಕೃತಿ ಸಾನನ್​, ರಾಜಕುಮಾರ್​ ರಾವ್​, ನಿರ್ದೇಶಕರಾದ ಅಭಿಷೇಕ್​ ಕಪೂರ್​, ಮುಕೇಶ್​ ಚಾಬ್ರ, ವಿವೇಕ್​ ಒಬೆರಾಯ್​, ರಣವೀರ್​ ಶೌರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ಸುಶಾಂತ್​ ಅವರ ಪಾರ್ಥೀವ ಶರೀರವನ್ನು ಪೋಸ್ಟ್​ ಮಾರ್ಟಂಗಾಗಿ ಕೂಪರ್​ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆ ನಂತರ ಅವರನ್ನು ವಿಲೆ ಪಾರ್ಲೆ ಚಿತಾಗಾರಕ್ಕೆ ಕರೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಮಳೆ ಇದ್ದರೂ, ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸುಶಾಂತ್​ ಅವರ ಅಂತಿಮ ದರ್ಶನವನ್ನು ಪಡೆದರು.

- Advertisement -
spot_img

Latest News

error: Content is protected !!