- Advertisement -
- Advertisement -
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಹೊಂಡಮಯವಾಗಿದ್ದು ವಾಹನ ಸಂಚಾರ ದುಸ್ತರವಾಗಿದೆ. ಕುಳಾಯಿ , ಕಾನ ರಸ್ತೆಯ ರೈಲ್ವೇ ಮೇಲ್ವೇತುವೆಯಲ್ಲಿ ವಾಹನ ಸಂಚಾರವೇ ಅಸಾಧ್ಯ ಎಂಬಂತಾಗಿತ್ತು.
ಕುಳಾಯಿ ಡಿ ವೈ ಎಫ್ ಐ , ಕಾನ ಘಟಕಗಳು ಪಾಲಿಕೆಯ ದುರಾಡಳಿತದ ವಿರುದ್ಧ ಧರಣಿ ನಡೆಸಿದವು . ಧರಣಿಗೆ ಸಿಕ್ಕಿದ ಜನ ಬೆಂಬಲ ಕಂಡು ಮಂಗಳೂರು ಪಾಲಿಕೆ ಧರಣಿ ಸಂದರ್ಭದಲ್ಲೇ ಮೇಲ್ವೇತುವೆ ದುರಸ್ಥಿ ಕಾರ್ಯ ಆರಂಭಿಸಿದ್ದು ಹೋರಾಟಕ್ಕೆ ಆರಂಭಿಕ ಯಶಸ್ಸು ದೊರಕಿತು. ಪಾಲಿಕೆ ಅಧಿಕಾರಿಗಳು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು .
(adsbygoogle = window.adsbygoogle || []).push({});- Advertisement -