- Advertisement -
- Advertisement -
ಸುಳ್ಯ : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುಳ್ಯದ ನಾವೂರು ನಿವಾಸಿ ಆಬಿದ್ ಹಾಗೂ ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ ನನ್ನು ಬಂಧಿಸಲಾಗಿತ್ತು. ಇಂದು ಈ ಇಬ್ಬರನ್ನು ಬೆಳಗ್ಗೆ 8 ಗಂಟೆಗೆ ಸುಳ್ಯದ ಆಲೆಟ್ಟಿ ಕ್ರಾಸ್ ನಲ್ಲಿರುವ ಎಸ್.ಡಿ.ಪಿ.ಐ ಕಚೇರಿಗೆ ಕರೆ ತಂದು ಸ್ಥಳ ಮಹಜರು ನಡೆಸಿದರು.
ಆರೋಪಿಗಳು ಇಲ್ಲೇ ಕೂತು ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಹಿನ್ನೆಲೆ ಪೊಲೀಸರು ಇಲ್ಲಿಗೆ ಕರೆ ತಂದು ಆರೋಪಿಗಳ ಸ್ಥಳ ಮಹಜರು ನಡೆಸಿದ್ದಾರೆ.
- Advertisement -