Friday, April 26, 2024
Homeಕರಾವಳಿಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ 6ನೇ ಸೇವಾ ಯೋಜನೆಯ ಸಹಾಯಧನ ವಿತರಣೆ

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ 6ನೇ ಸೇವಾ ಯೋಜನೆಯ ಸಹಾಯಧನ ವಿತರಣೆ

spot_img
- Advertisement -
- Advertisement -

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇದರ 6ನೇ ಸೇವಾ ಯೋಜನೆಯ ಸಹಾಯಧನವನ್ನು ಆರೋಗ್ಯ ಸಮಸ್ಯೆ, ಶಿಕ್ಷಣದ ಹೊರೆ ಹಾಗೂ ಇತರ ಆರ್ಥಿಕ ಸಮಸ್ಯೆಗಳಿಂದ ಕೂಡಿದ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಸಂಕದಕಟ್ಟೆ ನಿವಾಸಿ ಚೆನ್ನಪ್ಪ ಗೌಡ ಮತ್ತು ಕಮಲ ದಂಪತಿಯ ಕುಟುಂಬಕ್ಕೆ ರೂ15,000/-ದ ಚೆಕ್ಕನ್ನು ನಿಡ್ಲೆ ಗ್ರಾಮ ಸಮಿತಿಯ ಅಧ್ಯಕ್ಷರಾದ ನಿವೃತ್ತ ಉಪ ತಹಶೀಲ್ದಾರ ಶ್ರೀಯುತ ಚೆನ್ನಪ್ಪ ಗೌಡ ಇವರ ಮೂಲಕ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ತಾಲೂಕು ಸಂಘದ ನಿರ್ದೇಶಕರಾದ ಆನಂದ.ಡಿ ಗೌಡ ಉಜಿರೆ, ವಾಣಿ ಸೌಹಾರ್ದ ಕೋ-ಆಪರೇಟಿಪ್ ಲಿ. ನ ನಿರ್ದೇಶಕರಾದ ಸುರೇಶ್ ಕೌಡಂಗೆ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸೀತಾರಾಮ್ ಬೆಳಾಲು, ತಾಲೂಕು ಯುವ ವೇದಿಕೆಯ ಸದಸ್ಯರಾದ ಮಂಜುನಾಥ್ ಮತ್ತು ನಿತಿನ್ ಗೌಡ ಹೆಚ್ ಕಲ್ಮಂಜ, ನಿಡ್ಲೆ ಗ್ರಾಮದ ಯುವ ವೇದಿಕೆಯ ಕಾರ್ಯದರ್ಶಿ ರಾಜೇಂದ್ರ ನಿಡ್ಲೆ, ಸ್ಪಂದನಾ ಸೇವಾ ಸಂಘದ ಸದಸ್ಯರು ಹಾಗೂ ಸ್ಥಳೀಯ ನಿಡ್ಲೆ ಗ್ರಾಮದ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!