Monday, June 30, 2025
Homeಕರಾವಳಿಉಡುಪಿಕಾರ್ಕಳ; ನಿಲ್ಲಿಸಿದ್ದ ಹಿಟಾಚಿಗೆ ಬೆಂಕಿ ಹಚ್ಚಿದ ಪಾಪಿಗಳು

ಕಾರ್ಕಳ; ನಿಲ್ಲಿಸಿದ್ದ ಹಿಟಾಚಿಗೆ ಬೆಂಕಿ ಹಚ್ಚಿದ ಪಾಪಿಗಳು

spot_img
- Advertisement -
- Advertisement -

ಕಾರ್ಕಳ,: ನಿಲ್ಲಿಸಿದ್ದ ಹಿಟಾಚಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಪರಿಣಾಮ ಹಿಟಾಚಿ ಸಂಪೂರ್ಣವಾಗಿ ಸುಟ್ಟು  ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳದ ದಿನೇಶ್ ಶೆಟ್ಟಿ ಎಂಬವರು ತಮ್ಮ ಜಾಗದಲ್ಲಿ ಹೊಸ ಕ್ರಶರ್ ಪ್ರಾರಂಭಿಸಲು ಸ್ಥಳ ಸಮತಟ್ಟು ಮಾಡುವ ಉದ್ದೇಶದಿಂದ ಹಿಟಾಚಿ ಯಂತ್ರ ವನ್ನು ನಿಲ್ಲಿಸಿದ್ದರು.

ಇದಕ್ಕೆ ಕಿಡಿಗೇಡಿಗಳು ಬೆಂಕಿ ಕೊಟ್ಟಿದ್ದು, ಯಂತ್ರವು ಸುಟ್ಟು ಕರಕಲಾಗಿದೆ. ಇದರಿಂದ ಸುಮಾರು 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!