Friday, May 3, 2024
Homeಕರಾವಳಿಮಂಗಳೂರು: ಚರ್ಚ್‌ಗೆ ತೆರಳಿದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

ಮಂಗಳೂರು: ಚರ್ಚ್‌ಗೆ ತೆರಳಿದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

spot_img
- Advertisement -
- Advertisement -

ಮಂಗಳೂರು: ಗುಡ್‌ಫ್ರೈಡೆ ಪೂಜೆಗಾಗಿ ಚರ್ಚ್‌ಗೆ ತೆರಳಿದ ವೇಳೆ ಮನೆಯೊಂದಕ್ಕೆ ನುಗ್ಗಿ  ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಮಂಗಳಿನ ಕುಡುಪು ಸಮೀಪದ ಪೆದಮಲೆ ಪಾಲ್ದಾನೆ ನಡೆದಿದೆ.

ಎ.7ರಂದು ಸಂಜೆ 5:45ರ ವೇಳೆಗೆ ಪ್ರವೀಣ್ ಮೊಂತೇರೋ ತನ್ನ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿ ಪಾಲ್ದನೆ ಚರ್ಚ್‌ಗೆ ಹೋಗಿ ಮರಳಿ ರಾತ್ರಿ 7:45ಕ್ಕೆ ಬಂದಾಗ ಮನೆಯ ಛಾವಣಿಯ ಹೆಂಚುಗಳನ್ನು ತೆಗೆದು ಬೀಗ ಹಾಕಿದ್ದ ಕಬ್ಬಿಣದ ಕವಾಟಿನ ಬಾಗಿಲುಗಳನ್ನು ಮುರಿದು 20 ಗ್ರಾಂನ ಬಂಗಾರದ ಚೈನ್ ಮತ್ತು 8 ಗ್ರಾಂನ ಬಂಗಾರದ ಒಂದು ಜೊತೆ ಬೆಂಡೋಲೆ, 4 ಗ್ರಾಂನ ಒಂದು ಬಂಗಾರದ ಉಂಗುರ ಮತ್ತು ಪ್ರವೀಣ್ ಮೊಂತೇರೊರ ಕೋಣೆಯ ಕವಾಟಿನ ಪಿಗ್ಗಿ ಬಾಕ್ಸ್‌ನಲ್ಲಿದ್ದ ಅಂದಾಜು 4 ಸಾವಿರ ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕಳವಾದ 32 ಗ್ರಾಂ ತೂಕದ ಬಂಗಾರದ ಒಡವೆಗಳ ಮೌಲ್ಯ 1.20 ಲಕ್ಷ ರೂ.ಆಗಬಹುದೆಂದು ಅಂದಾಜಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!