Tuesday, May 7, 2024
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್ ಕುರಿತ ಕೋರ್ಟ್ ಅದೇಶ ಉಲ್ಲಂಘಿಸಿದ ಪ್ರಕರಣ: ಮೂರು...

ಬೆಳ್ತಂಗಡಿ : ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಪೋಸ್ಟ್ ಕುರಿತ ಕೋರ್ಟ್ ಅದೇಶ ಉಲ್ಲಂಘಿಸಿದ ಪ್ರಕರಣ: ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಿ ಇಂದು ಸೋಮನಾಥ್ ನಾಯಕ್ ಬಿಡುಗಡೆ

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ , ಧರ್ಮಾಧಿಕಾರಿ, ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣ ಸಂಬಂಧ ಕೋರ್ಟ್ ತಡೆಯಾಜ್ಞೆ ನೀಡಿದ್ದರು ಅದನ್ನು ಉಲ್ಲಂಘಿಸಿದ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಸಜೆ ಹಾಗೂ 4.5 ಲಕ್ಷ ಪರಿಹಾರ ನೀಡಲು ಆದೇಶ ಮಾಡಿದ್ದು, ಅದರಂತೆ ಸೋಮನಾಥ್ ನಾಯಕ್ 31-10-2022 ರಂದು ವಕೀಲರೊಂದಿಗೆ ಸಂಜೆ 3 ಗಂಟೆಗೆ CJ&JMFC ಬೆಳ್ತಂಗಡಿ ನ್ಯಾಯಾಧೀಶರಾದ ವಿಜಯೇಂದ್ರ  ಮುಂದೆ ಹಾಜರಾಗಿದ್ದರು ನಂತರ ಕೋರ್ಟ್ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿತ್ತು.

ಜ.30 ರಂದು ಮೂರು ತಿಂಗಳ ಜೈಲು ಶಿಕ್ಷೆ ಕೊನೆಗೊಂಡಿದ್ದು ಮತ್ತು 4 ಲಕ್ಷದ 52 ಸಾವಿರ ದಂಡ ಪಾವತಿಸಿದ್ದು ಇಂದು ಬೆಳ್ತಂಗಡಿ ನ್ಯಾಯಾಲಯದಿಂದ ಬಿಡುಗಡೆ ಪತ್ರ ಪಡೆದುಕೊಂಡು ಮಂಗಳೂರು ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾರೆ. ಬಿಡುಗಡೆ ವೇಳೆ ಮಂಗಳೂರು ಕಾರಾಗೃಹದ ಮುಂದೆ ಅಭಿಮಾನಿಗಳು ಹೂ ಹಾರ ಹಾಕಿ ಸ್ವಾಗತಿಸಿದರು. ಸಂಜೆ ವೇಳೆಗೆ ಬೆಳ್ತಂಗಡಿಗೆ ಆಗಮಿಸಿದರು.ಬಳಿಕ ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಅಭಿನಂದನಾ ಸಭೆ ಕೂಡ ನಡೆಯಿತು.

- Advertisement -
spot_img

Latest News

error: Content is protected !!