Tuesday, April 30, 2024
Homeತಾಜಾ ಸುದ್ದಿತಮಿಳುನಾಡಿನ ವೆಲ್ಲೂರು ಜೈಲಿನಿಂದ ರಾಜೀವ್ ಗಾಂಧಿ ಹಂತಕರ ಬಿಡುಗಡೆ

ತಮಿಳುನಾಡಿನ ವೆಲ್ಲೂರು ಜೈಲಿನಿಂದ ರಾಜೀವ್ ಗಾಂಧಿ ಹಂತಕರ ಬಿಡುಗಡೆ

spot_img
- Advertisement -
- Advertisement -

ಚೆನ್ನೈ: ಮಾಜಿ ಪ್ರಧಾನಮಂತ್ರಿ ದಿ. ರಾಜೀವ್ ಗಾಂಧಿ ಹತ್ಯೆಯ ಎಲ್ಲಾ ಆರೋಪಿಗಳನ್ನು ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರು ಜೈಲಿನಿಂದ ಎಲ್ಲಾ ಆರು ಜನ ಹಂತಕರನ್ನು ಬಿಡುಗಡೆ ಮಾಡಲಾಗಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ನಳಿನಿ ಶ್ರೀಹರನ್, ಸಂತನ್, ಮುರುಗನ್, ಶ್ರೀಹರನ್, ರಾಬರ್ಟ್ ಪೈಸ್, ರವಿಚಂದ್ರನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ

ನಿನ್ನೆಯಷ್ಟೇ ಆರು ಜನರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠ ನಿನ್ನೆ ಆದೇಶ ನೀಡಿತ್ತು.

ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪರೆಂಬದೂರಿನಲ್ಲಿ 1991ರ ಮೇ ತಿಂಗಳಿನಲ್ಲಿ ಚುನಾವಣಾ ರ಼್ಯಾಲಿಯಲ್ಲಿ ಎಲ್ ಟಿಟಿಇ ಆತ್ಮಹತ್ಯಾ ಬಾಂಬರ್ ಮೂಲಕ ಹತ್ಯೆ ಮಾಡಲಾಗಿತ್ತು.‌ ಈ ಘಟನೆಯಲ್ಲಿ ರಾಜೀವ್ ಗಾಂಧಿ ಮತ್ತು 21 ಜನರು ಸಾವನ್ನಪ್ಪಿದ್ದರು.

- Advertisement -
spot_img

Latest News

error: Content is protected !!