ಬೆಳ್ತಂಗಡಿ;ಮಾಲೀಕರೊಬ್ಬರು ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರಿನ ದಂಪತಿ ಬೆಳ್ತಂಗಡಿ ರೆಂಜಾಳದ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದರು. ಅವರ ಮನೆಯಲ್ಲಿಯೇ ದಂಪತಿಗೆ ಆಶ್ರಯ ನೀಡಿದ್ದರು. ದಿನಾಂಕ:14-05-2023 ರಂದು ಬೆಳಿಗ್ಗೆ 08-30 ಗಂಟೆಗೆ ಮಹಿಳೆಯನ್ನು ಆರೋಪಿ ಮಾಲೀಕ ಧರ್ಮಸ್ಥಳ ದಲ್ಲಿರುವ ತನ್ನ ಸಂಸ್ಥೆಗೆ ಕೆಲಸಕ್ಕೆ ಬಿಡುವುದಾಗಿ ತಿಳಿಸಿ ರೆಂಜಾಳದ ತನ್ನ ಮನೆಯಿಂದ ಮಹಿಳೆ ಒಬ್ಬರನ್ನೇ ಕಾರಿನಲ್ಲಿ ಕುಳ್ಳಿರಿಸಿಕೊಂಡು ಧರ್ಮಸ್ಥಳ ಮಾರ್ಗ ವಾಗಿ ಚಲಿಸದೇ ಕಿಡ್ನಾಪ್ ಮಾಡಿ ಕಕ್ಕಿಂಜೆ ಮಾರ್ಗವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ಮಹಿಳೆ ಸಂಶಯ ಬಂದು ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಗಂಡನಿಗೆ ಹೇಗೂ ಕೆಲಸ ಕೊಟ್ಟಿದ್ದಿನಲ್ಲಾ ಎಂದು ಹೇಳುತ್ತಾ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಹಿಳೆ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಆಗ ಜನ ಸೇರಿದ್ದರಿಂದ ಆರೋಪಿ ಮಹಿಳೆಯನ್ನು ಅಲ್ಲಿ ಇಳಿಸಿ ತೆರಳಿದ್ದಾರೆ. ಬಳಿಕ ಮಹಿಳೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾರೆ.