- Advertisement -
- Advertisement -
ಉಡುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಸೆಲ್ಫಿ ತೆಗೆದು ಕಳಿಸುವ ಐದು ವಿಜೇತರಿಗೆ ಐದು ಸಾವಿರ ಬಹುಮಾನವನ್ನು ಮಿಥುನ್ ರೈ ಘೋಷಿಸಿದ್ರು. ಹೀಗಾಗಿ ಇವತ್ತು ಉಡುಪಿಗೆ ಆಗಮಿಸಿದ್ದ ಶೋಭಾ ಜೊತೆ ಸೆಲ್ಫಿ ತೆಗೆದುಕೊಂಡ ಕಾರ್ಯಕರ್ತರು ಮಿಥುನ್ ರೈ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಸಚಿವರ ಜೊತೆ ಸೆಲ್ಫಿ ತೆಗೆದರೆ ಬಹುಮಾನ ನೀಡುವುದಾಗಿ ಕಾಂಗ್ರೆಸಿನ ಮಿಥುನ್ ರೈ ಹೇಳಿದ್ದಾರೆ. ಹೀಗಾಗಿ ಶೋಭಕ್ಕನ ಜೊತೆ ಮಹಿಳಾಮೋರ್ಚಾದ ತಂಡ ಸೆಲ್ಪಿ ತೆಗೆದು ಮಿಥುನ್ ರೈ ಅವರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
- Advertisement -