ಮಂಗಳೂರು : ಎನ್.ಓ.ಸಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಮಂಗಳೂರು ತಾಲೂಕು ಕಚೇರಿಯ ತಹಶೀಲ್ದಾರ್ ಸಹಾಯಕ(FDA) ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಹಾಯಕ (FDA) ಶಿವಾನಂದ ನಾಟೇಕಲ್ ಎಂಬಾತ(50) ಮಂಗಳೂರಿನ ಅರ್ಜಿದಾರರಿಂದ ಜಾಗದ ಮಾರಾಟ ಸಲುವಾಗಿ ಎನ್.ಓ.ಸಿ ಪಡೆಯಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಒಂದು ಸಾವಿರ ಹಣವನ್ನು ಮೊದಲೇ ಪಡೆದಿದ್ದ ಬಳಿಕ ಈ ಬಗ್ಗೆ ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರು, ಶುಕ್ರವಾರ ಬೆಳಗ್ಗೆ 11:30 ಗಂಟೆಗೆ ಉಳಿದ ಹಣ 4,700/- ರೂಪಾಯಿ ಹಣವನ್ನು ತಾಲೂಕು ಕಚೇರಿಯಲ್ಲಿ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಕಚೇರಿಯಲ್ಲಿ ರೆಡ್ ಹ್ಯಾಂಡ್ ಅಗಿ ಸೆರೆಹಿಡಿದಿದ್ದಾರೆ.ಆರೋಪಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ , ಡಿವೈಎಸ್ಪಿ ಚೆಲುವರಾಜ್, ಡಿವೈಎಸ್ಪಿ ಕಲಾವತಿ , ಇನ್ಸ್ಪೆಕ್ಟರ್ ಅಮಾನುಲ್ಲಾ ಮತ್ತು ಸಿಬ್ಬಂದಿ ಭಾಗವಹಿಸಿದರು.