Friday, May 3, 2024
Homeಕರಾವಳಿಪ್ರವೀಣ್‌ ಹತ್ಯೆಯಲ್ಲಿ ಭಾಗಿಯಾದವನಿಗೆ ಎಸ್‌ಡಿಪಿಐ ಟಿಕೆಟ್!‌ ಪಿಎಫ್‌ಐನಂತೆ ಎಸ್‌ಡಿಪಿಐ ಸಂಘಟನೆಯನ್ನೂ ನಿಷೇಧಿಸಬೇಕು: ಆರ್‌.ಅಶೋಕ್

ಪ್ರವೀಣ್‌ ಹತ್ಯೆಯಲ್ಲಿ ಭಾಗಿಯಾದವನಿಗೆ ಎಸ್‌ಡಿಪಿಐ ಟಿಕೆಟ್!‌ ಪಿಎಫ್‌ಐನಂತೆ ಎಸ್‌ಡಿಪಿಐ ಸಂಘಟನೆಯನ್ನೂ ನಿಷೇಧಿಸಬೇಕು: ಆರ್‌.ಅಶೋಕ್

spot_img
- Advertisement -
- Advertisement -

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐ ತಯಾರಿ ನಡೆಸುತ್ತಿದ್ದು ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಪುತ್ತೂರಿನಿಂದ ಟಿಕೆಟ್​ ಘೋಷಿಸಿದೆ. ಶಾಫಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಆದ್ರೆ ಎಸ್‌ಡಿಪಿಐನ ಈ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್‌. ಅಶೋಕ್, ಪ್ರವೀಣ್‌ ಹತ್ಯೆಯಲ್ಲಿ ಭಾಗಿಯಾದವನಿಗೆ ಎಸ್‌ಡಿಪಿಐ ಟಿಕೆಟ್ ಘೋಷಿಸಿದೆ. ಎಸ್‌ಡಿಪಿಐ ಉಗ್ರರಿಗೆ ಟಿಕೆಟ್‌ ಕೊಡ್ತಿದೆ. ಪಿಎಫ್‌ಐ ರೀತಿಯಲ್ಲೇ ಎಸ್​ಡಿ‌ಪಿಐ ಸಂಘಟನೆಯನ್ನೂ ನಿಷೇಧಿಸಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ಈ ಸಂಘಟನೆ ದೇಶವಿರೋಧಿ ಚಟುವಟಿಕೆಯ ಅಂಗ ಅಂತ ಕಿಡಿ ಕಾರಿದ್ರು.

- Advertisement -
spot_img

Latest News

error: Content is protected !!