- Advertisement -
- Advertisement -
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಎಸ್ಡಿಪಿಐ ತಯಾರಿ ನಡೆಸುತ್ತಿದ್ದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಪುತ್ತೂರಿನಿಂದ ಟಿಕೆಟ್ ಘೋಷಿಸಿದೆ. ಶಾಫಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಆದ್ರೆ ಎಸ್ಡಿಪಿಐನ ಈ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದವನಿಗೆ ಎಸ್ಡಿಪಿಐ ಟಿಕೆಟ್ ಘೋಷಿಸಿದೆ. ಎಸ್ಡಿಪಿಐ ಉಗ್ರರಿಗೆ ಟಿಕೆಟ್ ಕೊಡ್ತಿದೆ. ಪಿಎಫ್ಐ ರೀತಿಯಲ್ಲೇ ಎಸ್ಡಿಪಿಐ ಸಂಘಟನೆಯನ್ನೂ ನಿಷೇಧಿಸಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ಈ ಸಂಘಟನೆ ದೇಶವಿರೋಧಿ ಚಟುವಟಿಕೆಯ ಅಂಗ ಅಂತ ಕಿಡಿ ಕಾರಿದ್ರು.
- Advertisement -