ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕದ ಬೇಡಿಕೆಯ ಸ್ಥಳ ಪರಿಶೀಲನೆ ಮಾಡಲು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕರಿಕಲನ್ ಸಂಪಾಜೆಗೆ ಭೇಟಿ ನೀಡಿ, ಸ್ಥಳೀಯರು ಜನಪ್ರತಿನಿಧಿಗಳು ಆಗು ನಾಗರಿಕರೊಂದಿಗೆ ಸಮಾಲೋಚಿಸಿದರು. ಬೇಡಿಕೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮ ಈ ಸ್ಥಳ ಒದಗಿಸಲು ಹಲವು ವರ್ಷಗಳಿಂದ ಬೇಡಿಕೆಯನ್ನು ಸಲ್ಲಿಸಿತು ಇದೀಗ ಒನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಿ ಇಲಾಖೆ ಗಮನ ಹರಿಸಿದೆ
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಮಂಜುನಾಥ ಫಾರೆಸ್ಟ್ ಚಂದ್ರು ಅರಣ್ಯ ಇಲಾಖೆಯ ಶಿವಕುಮಾರ್, ಸುಂದರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಮೀದ್ ಜಿ. ಕೆ. ಸದಸ್ಯ ಷಣ್ಮುಗಂ. ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ, ಕಾರ್ಮಿಕ ಮುಖಂಡರಾದ ಜೋನಿ ಕೆ. ಪಿ ಜನಶೀಲನ್(ರಾಜು), ಹನೀಫ್ ಎಸ್.ಕೆ. ಭರತ್ ನಂದಾ ಬಾಚಿಗದ್ದೆ ಉಪಸ್ಥಿತರಿದ್ದರು
ಭೇಟಿ ನೀಡಿದ ಸಮಯದಲ್ಲಿ ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಸ್ಮಶಾನ ಸ್ಥಳದ ಬಗ್ಗೆ ಹಾಗೂ ರಾಜರಂಪುರ ಸಬಸ್ಟೇಷನ್ ಸ್ಥಳದ ಬಗ್ಗೆ ಪ್ರಸ್ತಾಪಿಸಿದಗ ಸಬಸ್ಟೇಷನ್ ಸ್ಥಳ ಈಗಾಗಲೇ ನಮ್ಮಿಂದ ಮೇಲಧಿಕಾರಿಗಳಿಗೆ ಹೋಗಿದೆ ಆಗು ಘನ ತ್ಯಾಜ್ಯ ಘಟಕದ ಬಗ್ಗೆಯೂ ಕೂಡಲೇ ಮೇಲಧಿಕಾರಿಗಳಿಗೆ ಕಳುಹಿಸಿ ಕೊಡುದಾಗಿ ತಿಳಿಸಿದರು.