ರಾಮನಗರ: ಇಡೀ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಮಂಗಳೂರು, ಕರ್ನಾಟಕ ಕೇಂದ್ರವಾಗುತ್ತಿದೆ ಎಂದು ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಪ್ರಭಾಕರ ಭಟ್, ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡದಿದ್ದರೆ ಸಮಾಜದ ಬದುಕು ಕಷ್ಟವಿದ್ದು ಹಿಂದೂಗಳನ್ನು ನಾಶ ಮಾಡುವ ದೊಡ್ಡ ಭಯೋತ್ಪಾದನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಶಾರೀಕ್ ಬಗ್ಗೆ ಅವರ ಕುಟುಂಬಕ್ಕೂ ಮೊದಲೇ ಗೊತ್ತಿತ್ತು, ಮನೆಯವರು ಸರಿಯಾಗು ಆಂತಾ ಹೇಳಿದ್ದರೂ ಅವನು ಸರಿಯಾಗಿರಲಿಲ್ಲ ಎಂದು ಹೇಳಿರುವ ಕಲ್ಲಡ್ಕ ಪ್ರಭಾಕರ ಭಟ್, ಶಾರಿಕ್ ಕುಟುಂಬವೇ ಅವನಿಗೆ ಬೆಂಬಲ ನೀಡಿತ್ತು ಎಂದು ಆರೋಪಿಸಿದ್ದಾರೆ.
ಎಲ್ಲಾ ಮುಸಲ್ಮಾನರು ಭಯೋತ್ಪಾದಕರು ಆಗದೇ ಇರಬಹುದು ಆದರೆ ಭಯೋತ್ಪಾದಕರೆಲ್ಲಾ ಮುಸಲ್ಮಾನವರೇ ಆಗಿದ್ದಾರೆ ಎಂದು ಹೇಳಿಕೆ ನೀಡಿರುವ ಪ್ರಭಾಕರ ಭಟ್, ಹಿಂದೂ ಸಮಾಜ ಎಚ್ಚರದಿಂದ ಇರಬೇಕು ಎಂದಿದ್ದಾರೆ. ಇದೇ ವೇಳೆ ಮಂಗಳೂರು ಭಾಗದಲ್ಲಿ ರಾಷ್ಟ್ರೀಯ ತನಿಖಾ ದಳದ ಕಛೇರಿ ಆದಷ್ಟು ಬೇಗ ತೆರೆಯಬೇಕು ಎಂದು ಕಲ್ಲಡ್ಕ ಪ್ರಭಾಕರ ಭಟ್ ಆಗ್ರಹಿಸಿದ್ದಾರೆ.