ಹಿಜಾಬ್ ದಂಗಲ್ ವಿವಾದ ಜೋರಾಗಿಯೇ ನಡೀತಾ ಇದೆ. ಈ ವಿವಾದದ ನಡುವೆ ಯಾದಗಿರಿಯ ಸೈದಾಪುರದಲ್ಲಿ ರಾಮೋತ್ಸವ ಹಾಗೂ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ RSS ಮುಖಂಡ ಡಾ. ಹನುಮಂತ ಮಳಲಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಯಾವುದೇ ಕಾರಣಕ್ಕೂ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು, ಏಕರೂಪ ನಾಗರಿಕ ಸಂಹಿತೆ ಜಾರಿ ಆಗುವವರೆಗೂ ಎರಡೂ ಇದ್ದವರು ಮೂರು, ಮೂರು ಇದ್ದವರು ನಾಲ್ಕು, ನಾಲ್ಕು ಇದ್ದವರು ಐದು ಮಕ್ಕಳನ್ನು ಹಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡದ್ದಾರೆ.
ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಬಗ್ಗೆ RSS ಮುಖಂಡ ಹಣಮಂತ ಮಳಲಿ ಆಕ್ರೋಶ ವ್ಯಕ್ತಪಡಿಸಿದ್ದು, ಶಾರುಖ್ ಖಾನ್ ಮಗಳಿಗೆ ಹಿಜಾಬ್ ತೋಡಿಸೋಕೆ ಗಂಡಸ್ತನ ಇಲ್ವಾ..! ಬಡವರ ಮಕ್ಕಳಿಗೆ ಹಿಜಾಬ್ ಹಾಕಿಸಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದಿರಾ..? ಮೊದಲು ಕಾನೂನಿಗೆ ಗೌರವ ಕೊಡಿ, ಕೋರ್ಟ್ ಆದೇಶ ಪಾಲನೆ ಮಾಡಿ. ಶಾಲೆಯಲ್ಲಿ ಸಮವಸ್ತ್ರ ಪಾಲನೆ ಮಾಡಬೇಕೆಂದು ಕೋರ್ಟ್ ಹೇಳಿದೆ. ಹಿಜಾಬ್ ವಿವಾದ ಸೃಷ್ಟಿ ಮಾಡಿದ ಮುಸ್ಲಿಂರಿಂದ ಹಿಂದುಗಳು ಎಚ್ಚರ ಆಗಿದ್ದಾರೆ. ಹಿಜಾಬ್ ನ್ನು ಮನೆಯಲ್ಲಾದರೂ ಹಾಕೊಳ್ಳಿ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕಿಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇನ್ನೂ ಮುಂದೆ ನಡೆಯಲ್ಲ, ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡ್ತಿದ್ದಾರೆ. ನಮ್ಮ ಹುಡುಗರು ಮನಸ್ಸು ಮಾಡಿದ್ರೆ, ನಮ್ಮ ಹುಡುಗರಿಗೆ ಒಂದೇ ವಾರಕ್ಕೆ ಸಾಕಾಗಲ್ಲ, ದೇಶದಲ್ಲಿ ಮದುವೆಗೆ ಬಂದವರು 23 ಕೋಟಿ ಹಿಂದೂ ತರುಣರಿದ್ದಾರೆ, ನಮ್ಮ ರಾಮಣ್ಣನ ಕರೆದುಕೊಂಡು ಹೋಗಿ ರಾಬರ್ಟ್ ಮಾಡ್ತಿದ್ದಾರೆ. ನಮಗೆ ಅದು ಬೇಕಾಗಿಲ್ಲ, ನಾವು ಗಿಳಿ ತೆಗೆದುಕೊಂಡು ಹೋಗಿ, ಕಾಗಿ ಮಾಡಲ್ಲ, ಕಾಗಿ ತಗೊಂಡು ಹೋಗಿ ಗಿಳಿ ಮಾಡಲ್ಲ ಎಂದರು.