- Advertisement -
- Advertisement -
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಕ್ರ ನದಿ ತುಂಬಿ ಹರಿಯುತ್ತಿದ್ದು, ನದಿಯ ನೀರು ಕುಂದಾಪುರ ತಾಲೂಕಿನಲ್ಲಿರುವ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲದ ಪ್ರವೇಶಿಸಿದ್ದು ಗರ್ಭಗುಡಿ ಜಲಾವೃತವಾಗಿದೆ.
ದೇವಸ್ಥಾನದ ಗರ್ಭಗುಡಿವರೆಗೆ ನದಿ ನೀರು ಹರಿದು ಬಂದಿದೆ. ಚಕ್ರ ನದಿ ತೀರದಲ್ಲೇ ಇರುವ ಕಮಲಶಿಲೆ ದೇಗುಲವಿರೋದರಿಂದ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ದೇಗುಲದೊಳಗೆ ಮಳೆ ನೀರು ಪ್ರವೇಶಿಸುತ್ತದೆ. ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ಸ್ಥಳೀಯ ಭಕ್ತರು ಅರ್ಚಕರ ಸಮ್ಮುಖದಲ್ಲಿ ದೇವಿಗೆ ವಿಶೇಷ ಆರತಿ ಸೇವೆ ಸಲ್ಲಿಸಿದ್ದಾರೆ.
- Advertisement -