- Advertisement -
![]()
- Advertisement -
ಸುಳ್ಯ; ರಿಕ್ಷಾವೊಂದು 20 ಅಡಿ ಆಳದ ಅಂಗಳಕ್ಕೆ ಪಲ್ಟಿಯಾದ ಘಟನೆ ಅಮರ ಪಡ್ನೂರು ಗ್ರಾಮದ ಶೇಣಿ ಎಂಬಲ್ಲಿ ಸೆ.16ರಂದು ನಡೆದಿದೆ.
ಕುಕ್ಕುಜಡ್ಕದ ಭಾಸ್ಕರ ಆಚಾರ್ಯ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಆಟೋ ಕುಳ್ಳಾಜೆ ವೆಂಕಟ್ರಮಣ ಭಟ್ ರವರ ಅಂಗಳಕ್ಕೆ ಪಲ್ಟಿಯಾಗಿದೆ. ಬಿದ್ದ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ವೇಳೆ ಆಟೋ ಚಾಲಕರೊಬ್ಬರೇ ಆಟೋದಲ್ಲಿದ್ದರು ಎನ್ನಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.
- Advertisement -


