- Advertisement -
- Advertisement -
ಉಡುಪಿ: ಮಣಿಪಾಲ, ಪರ್ಕಳ ಪರಿಸರದಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರಿಗೆ ಕ್ಯಾನ್ಸರ್ ಉಲ್ಬಣಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರು ರೋಗಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಶನಿವಾರ ದಾಖಲಿಸಿದ್ದಾರೆ.
ರೋಗಿಯನ್ನು ಸುಳ್ಯದ ಬೆಳ್ಳಾರೆ ನಿವಾಸಿ ವಾಸುದೇವ ಗೌಡ (55) ಎನ್ನಲಾಗಿದೆ
ವಾಸುದೇವ ಅವರ ವಾರಸುದಾರರು ಇದ್ದಲ್ಲಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬಹುದು.
- Advertisement -