Friday, June 27, 2025
Homeತಾಜಾ ಸುದ್ದಿಕೋರ್ಟ್ ಡಿಕ್ರಿ/ ರಾಜಿ ಡಿಕ್ರಿಯ ಆಧಾರದಲ್ಲಿ ಆರ್.ಟಿ.ಸಿ ದಾಖಲಿಸುವಂತೆ ಅಧಿವೇಶನದಲ್ಲಿ ಗಮನ ಸೆಳೆದ ವಿಧಾನ ಪರಿಷತ್...

ಕೋರ್ಟ್ ಡಿಕ್ರಿ/ ರಾಜಿ ಡಿಕ್ರಿಯ ಆಧಾರದಲ್ಲಿ ಆರ್.ಟಿ.ಸಿ ದಾಖಲಿಸುವಂತೆ ಅಧಿವೇಶನದಲ್ಲಿ ಗಮನ ಸೆಳೆದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್‌

spot_img
- Advertisement -
- Advertisement -

ಬೆಳ್ತಂಗಡಿ: ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದ ಡಿಕ್ರಿ/ರಾಜಿ ಡಿಕ್ರಿಯ ಆಧಾರದಲ್ಲಿ ಆರ್.ಟಿ.ಸಿ ದಾಖಲಾಗದೆ ಅತಂತ್ರದಲ್ಲಿರುವ ಸಾರ್ವಜನಿಕರ ಪರವಾಗಿ ವಿಧಾನ ಪರಿಷತ್ ನ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ರವರು ಗಮನ ಸೆಳೆಯುವ ಸೂಚನೆ ಮಂಡಿಸಿದ್ದು ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ರವರ ಪರವಾಗಿ ಉತ್ತರಿಸಿದ ಸಭಾ ನಾಯಕ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಪರಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೋರ್ಟ್ ಡಿಕ್ರಿಯಂತೆ ಪಹಣಿ ದಾಖಲಿಸಲು ಇರುವ ತೊಡಕನ್ನು ಸರಿಪಡಿಸುವಂತೆ ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಇತ್ತೀಚಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪ ಸಿಂಹ ನಾಯಕ್ ಮತ್ತು ಹರೀಶ್ ಕುಮಾರ್ ರವರುಗಳಿಗೆ ಮನವಿ ಸಲ್ಲಿಸಲಾಗಿತ್ತು.

ಸಂಘದ ಮನವಿಗೆ ಸ್ಪಂದಿಸಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ರವರಿಗೆ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಪ್ರಸಾದ್, ಕೆ.ಎಸ್ ಮತ್ತು ಪ್ರದಾನ ಕಾರ್ಯದರ್ಶಿ ಶೈಲೇಶ್ ಆರ್ ಟೋಸರ್ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!