Friday, May 3, 2024
Homeತಾಜಾ ಸುದ್ದಿRSS ನಲ್ಲಿ ಬ್ರಾಹ್ಮಣ,ಗೌಡ,ಲಿಂಗಾಯತ, ಎನ್ನುವ ಯಾವ ಭೇಧವೂ ಇಲ್ಲ: ಎಲ್ಲರೂ ರಾಷ್ಟ್ರೀಯ ಸ್ವಯಂ ಸೇವಕರೇ: ಆರೆಸ್ಸೆಸ್‌...

RSS ನಲ್ಲಿ ಬ್ರಾಹ್ಮಣ,ಗೌಡ,ಲಿಂಗಾಯತ, ಎನ್ನುವ ಯಾವ ಭೇಧವೂ ಇಲ್ಲ: ಎಲ್ಲರೂ ರಾಷ್ಟ್ರೀಯ ಸ್ವಯಂ ಸೇವಕರೇ: ಆರೆಸ್ಸೆಸ್‌ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು

spot_img
- Advertisement -
- Advertisement -

ಬೆಂಗಳೂರು: ಈ ಬಾರಿ ಪರಮೇಶ್ವರ್‌ಗೆ ಯಾಮಾರಿಸಿದಂತೆ ಮಹಾನಾಯಕನ ಬೆನ್ನಿಗೆ ಚೂರಿ ಹಾಕಲು ಸಾಧ್ಯವೇ ಇಲ್ಲ. ನೀವು ಗುಂಡಿ ತೋಡುವ ಮೊದಲೇ ಅವರು ಬೇಟೆ ಮುಗಿಸುತ್ತಾರೆ. ಯಾವುದಕ್ಕೂ ಎಚ್ಚರ.! ಹೀಗೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಅವರಿಗೆ ಎಚ್ಚರಿಸಿದ್ದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ.!

ಹೌದು.. ಆರೆಸ್ಸೆಸ್‌ ಕುರಿತಾದ ಸಿದ್ದರಾಮಯ್ಯ ಹೇಳಿಕೆಗೆ ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿರುವ ಅವರು, ಅರ್ಯರು, ದ್ರಾವಿಡರ‌ ಮೂಲದ ಬಗ್ಗೆ ಬೊಬ್ಬೆ ಹಾಕುತ್ತಿರುವ ನಿಮಗೆ ಭಾರತದ ಇತಿಹಾಸದ ಜ್ಞಾನದ ಕೊರತೆ ಇದೆ ಇರಬೇಕು. ಒಂದೇ ಸಮುದಾಯ ದ್ರಾವಿಡ ವರ್ಗಕ್ಕೆ ಸೇರಿದ್ದರು ಎನ್ನುವುದಾದರೆ ರಾಜ್ಯಸಭೆಯ ಚುನಾವಣೆಗೆ ನಿಮ್ಮ ಪಕ್ಷದಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಅದೇ ಒಂದೇ ವರ್ಗಕ್ಕೆ ಸೇರಿದವರು. ಇವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ನ್ಯಾಯ ಎಂದು ಕಂಡಕಂಡಲ್ಲಿ ಕಂಠಶೋಷಣೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯನವರೇ, ವಿಧಾನ ಪರಿಷತ್ ಚುನಾವಣೆಯಲ್ಲಿ ದಲಿತರಿಗೆ ಟಿಕೆಟ್ ಕೊಡಬೇಕು ಎಂಬ ಆಲೋಚನೆ ಬರಲಿಲ್ಲವೇ? ಅಥವಾ ನಿಮ್ಮ ಬಾಲಬುಡಕರಿಗೆ ಕೈ ತಪ್ಪಿದ್ದರಿಂದ ಜಾಣಮೌನ ತೋರಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿರುವ ರೇಣುಕಾಚಾರ್ಯ, ಕಾಂಗ್ರೆಸ್‌ನ ಉನ್ನತಾಧಿಕಾರ ಒಂದೇ ಕುಟುಂಬದ ಹಿಡಿತದಲ್ಲಿದೆ.? ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೆಹರು ಕುಟುಂಬದವರು ಬಿಟ್ಟು ಬೇರೆಯವರನ್ನು ನೀವು ಕೂರಿಸಿದ ನಂತರ ಈ ಪ್ರಶ್ನೆ ಕೇಳಬಹುದು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನೆಹರೂ ಕುಟುಂಬದವರಿಗೆ ಯಾಕೆ ಕೊಡಬೇಕು ಆ ಪಕ್ಷದಲ್ಲಿ ಉಳಿದವರೆಲ್ಲ ನರ ಸತ್ತವರಾ? ಎಂದು ಪ್ರಶ್ನೆ ಮಾಡಿದ್ದಾರೆ.

RSS ನಲ್ಲಿ ಬ್ರಾಹ್ಮಣ,ಗೌಡ,ಲಿಂಗಾಯತ, ಕುರುಬ, ಜೈನ, ಮಾರವಾಡಿ,ಯಾದವ ಮತ್ತು ಮುಸ್ಲಿಂ ಎನ್ನುವ ಯಾವ ಭೇಧವನ್ನೂ ಇಟ್ಟಿಲ್ಲ. ಎಲ್ಲರೂ ರಾಷ್ಟ್ರೀಯ ಸ್ವಯಂ ಸೇವಕರೇ. ಎಲ್ಲರಲ್ಲಿಯೂ ಒಂದೇ ಭಾವನೆ ಒಂದೇ ದೇಶಭಕ್ತಿ. ಭೇದ-ಭಾವ ಇರುವುದು ನಿಮ್ಮಕಾಂಗ್ರೆಸ್‌ನಲ್ಲಿ ಮಾತ್ರ ಎಂದು ತಿರುಗೇಟು ನೀಡಿರುವ ಎಂಪಿಆರ್, RSS ತನ್ನ ಎಲ್ಲಾ ಹುದ್ದೆಗಳನ್ನು ಒಂದೇ ಸಮುದಾಯಕ್ಕೆ ನೀಡಿದೆ ಎಂದು ರೋಧಿಸುತ್ತಿರುವ ಸಿದ್ದರಾಮಯ್ಯನವರೇ, ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ‌ಸ್ಥಾನ ಯಾರ ಬಳಿ ಇದೆ. ಇದರ ಬಗ್ಗೆ ಎಂದಾದರೂ ನೀವು ಪ್ರಶ್ನೆ ಮಾಡಿದ್ದೀರಾ? ಮಾಡಿದರೆ, ನಿಮಗೆ ನೇರವಾಗಿ ‌ಸಿದ್ದರಾಮಯ್ಯನ ಹುಂಡಿಗೆ ಗೇಟ್ ಪಾಸ್ ಸಿಗಬಹುದೇ ಎಂಬ ಭಯ ಕಾಡುತ್ತಿದಿಯೇ? ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು RSS ವಿರುದ್ಧ ಮಾತನಾಡಿದರೆ ದೆಹಲಿ ನಾಯಕರು ಸಂತೃಪ್ತಿಗೊಳ್ಳಬಹುದು ಎಂದು ಭಾವಿಸಿದರೆ ಅದು‌ ನಿಮ್ಮ ಭ್ರಮೆ ಅಷ್ಟೇ.! ಎಂದಿರುವ ಅವರು, ಏಕೆಂದರೆ ನರಿಯ ಕೂಗು ಗಿರಿಗೆ ಕೇಳಿಸುವುದುಂಟೆ ? ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ನೀವು ಟೀಕೆ ಮಾಡಿದಷ್ಡು ಅದು‌ ಎತ್ತರಕ್ಕೆ ಬೆಳೆಯುತ್ತಲೇ ಇದೆ. RSS ನಲ್ಲಿ ದಲಿತರಿಗೆ ಉನ್ನತ ಹುದ್ದೆಯ ಬಗ್ಗೆ ಮಾತನಾಡುವ ಮಾನ್ಯ ಸಿದ್ದರಾಮಯ್ಯನವರೇ 2018 ರ ವಿಧಾನಸಭೆ ಹಾಗೂ 2019 ರ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ವರ್ಗದ ಸ್ವಾಭಿಮಾನಿ ಜನತೆಯು ನಕಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಂಡರೆ‌ ನಿಮಗೆ ಒಳಿತು ಎಂದಿದ್ದಾರೆ.

- Advertisement -
spot_img

Latest News

error: Content is protected !!