Monday, June 30, 2025
Homeತಾಜಾ ಸುದ್ದಿದೇಶದ ಎಲ್ಲ ನಿಘಂಟುಗಳಿಂದಲೂ 'ಶೂದ್ರ' ಎಂಬ ಪದ ತೆಗೆದು ಹಾಕಿ- ಹಂಸಲೇಖ

ದೇಶದ ಎಲ್ಲ ನಿಘಂಟುಗಳಿಂದಲೂ ‘ಶೂದ್ರ’ ಎಂಬ ಪದ ತೆಗೆದು ಹಾಕಿ- ಹಂಸಲೇಖ

spot_img
- Advertisement -
- Advertisement -

ಚಿತ್ರದುರ್ಗ: ದೇಶದಲ್ಲಿರುವ ಎಲ್ಲ ನಿಘಂಟುಗಳಿಂದಲೂ ಶೂದ್ರ ಎಂಬ ಪದ ತೆಗೆದು ಹಾಕಿ. ಅದರ ಬದಲಿಗೆ ಶುದ್ಧ ಪದ ಬಳಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ದೇಶದ ಎಲ್ಲ ನಿಘಂಟುಗಳಿಂದಲೂ ‘ಶೂದ್ರ’ ಎಂಬ ಪದ ತೆಗೆದು ಹಾಕಿ. ಅದರ ಬದಲಿಗೆ ಶುದ್ಧ ಎಂಬ ಪದ ಬಳಸೋಣ. ದೇಶದಲ್ಲಿ ನಾವು ಶುದ್ಧರೇ ಆಗಿದ್ದೇವೆ. ಇದನ್ನು ಬಂಧುತ್ವ ವೇದಿಕೆ ಪ್ರಣಾಳಿಕೆಯಲ್ಲೂ ಸೇರಿಸಬೇಕು. ಈ ಕುರಿತು ಹಾಡೊಂದನ್ನು ರಚಿಸಿ ಅಂಬೇಡ್ಕರ್​ ಜನ್ಮದಿನದಂದು ನಾಡಿಗೆ ಸಮರ್ಪಿಸುತ್ತೇನೆ ಎಂದರು.

ಇನ್ನು ಶುದ್ಧ-ಪ್ರಬುದ್ಧರು ಇಂದು ನಮ್ಮ ನಾಯಕರಾಗ ಬೇಕಿದ್ದು, ಅವರ ಮೂಲಕ ನಮ್ಮ ಪ್ರಜಾಪ್ರಭುತ್ವನ್ನು ಉಳಿಸಿ-ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೊಣೆಯರಿತ ಜ್ಞಾನಿಗಳಾಗಬೇಕಿದೆ. ನೀವು ಶುದ್ಧರಾಗಿ, ಸೇವೆಯಲ್ಲೂ ಶುದ್ಧತೆ ಇರಲಿ, ಶುದ್ಧತೆ ಹೊಂದಿದವರನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!