- Advertisement -
- Advertisement -
ಬೆಂಗಳೂರು; ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಿರುತೆರೆ ಕಲಾವಿದ, ಮಗಳು ಜಾನಕಿ ಧಾರಾವಾಹಿ ಚಂದು ಭಾರ್ಗಿ ಖ್ಯಾತಿಯ ಮಂಡ್ಯ ರವಿ ( ರವಿಪ್ರಸಾದ್ ಮಂಡ್ಯ) ವಿಧಿವಶರಾಗಿದ್ದಾರೆ. ಕೆಲವು ಹೊತ್ತಿನ ಮೊದಲು ಅವರ ತಂದೆ ನನ್ನ ಮಗ ಸತ್ತಿಲ್ಲ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. ಆದರೆ ಈಗ ಆಸ್ಪತ್ರೆ ವೈದ್ಯರೇ ರವಿ ಅವರ ಅಗಲಿಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಮಂಡ್ಯ ರವಿ ಅವರು ಜಾಂಡೀಸ್ನಿಂದ ಬಳಲುತ್ತಿದ್ದರು. ಜೊತೆಗೆ ಕಿಡ್ನಿ ಸಮಸ್ಯೆ ಅವರನ್ನು ಕಾಡುತ್ತಿತ್ತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಆದರೆ ಚಿಕತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
- Advertisement -