ಬೆಳ್ತಂಗಡಿ : ಪಟಾಕಿ ಸ್ಟೋಟಗೊಂಡ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ರವಿ.ಡಿ.ಚೆನ್ನಣ್ಣವರ್ ಭೇಟಿ ಮೂವರು ಸಾವನ್ನಪ್ಪಿದ್ದು. ಈ ಪ್ರದೇಶಕ್ಕೆ ತುರ್ತು ಮತ್ತು ಅಗ್ನಿಶಾಮಕ ದಳದ ಡಿಐಜಿ ರವಿ.ಡಿ.ಚೆನ್ನಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಡ್ತ್ಯಾರ್ ನಲ್ಲಿ ಸೋಲಿಡ್ ಫೈರ್ ವರ್ಕ್ಸ್ ಎಂಬ ಹೆಸರಿನ ಪಟಾಕಿ ತಯಾರಿಕಾ ಘಟಕ ನಡೆಸುತ್ತಿದ್ದ ಸೈಯದ್ ಬಶೀರ್ ಎಂಬವರ ಗೋಡೌನ್ ಪಕ್ಕದ ಮತ್ತೊಂದು ಕಟ್ಟಡದಲ್ಲಿ ಜ.28 ರಂದು ಸಂಜೆ ಸ್ಟೋಟಗೊಂಡು ಕೇರಳದ ಸ್ವಾಮಿ@ಕುನ್ನಿ@ ನಾರಾಯಣ(55) , ಕೇರಳದ ವರ್ಗಿಸ್(68) , ಹಾಸನದ ಚೇತನ್(24) ಸಾವನ್ನಪ್ಪಿದ್ದರು.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು. ಘಟನೆ ಬಗ್ಗೆ ಮಾಹಿತಿ ಪಡೆಯಲು ಅಗ್ನಿಶಾಮಕ ಮತ್ತು ತುರ್ತು ಸೇವೆಯ ಡಿಐಜಿ ರವಿ.ಡಿ.ಚೆನ್ನಣ್ಣವರ್ ಜ.29 ರಂದು ಸಂಜೆ ಘಟನಾ ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕಿದರು. ಎಫ್ಎಸ್ಎಲ್ , ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು.
ಡಿಐಜಿ ರವಿ.ಡಿ.ಚೆನ್ನಣ್ಣವರ್ ಭೇಟಿ ವೇಳೆ ಎಸ್ಪಿ.ಸಿ.ಬಿ.ರಿಷ್ಯಂತ್, ಅಗ್ನಿಶಾಮಕ ಅಧಿಕಾರಿಗಳು , ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.