ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು ರಕ್ಷಿತ್. ಈ ಸಿನಿಮಾವು ದೊಡ್ಡ ಹಿಟ್ ಆಗುವುದರ ಜೊತೆಗೆ ದೊಡ್ಡ ಹೆಸರನ್ನು ಪಡೆದಿತ್ತು. ಆದರೆ ಈ ನಟಿಯು ತನ್ನ ಬೆಳವಣಿಗೆಗೆ ಕಾರಣರಾದ ನಟ ರಕ್ಷಿತ್ ಶೆಟ್ಟಿ ಬರ್ತ್ಡೇಗೆ ಇಂದು ವಿಷ್ ಮಾಡಲೇ ಇಲ್ಲ.
ಆದರೆ ರಕ್ಷಿತ್ ಶೆಟ್ಟಿ ತಮ್ಮ ಪರಮ್ ಸ್ಟುಡಿಯೋಸ್ ನಿಂದ ಏಪ್ರಿಲ್ 5 ರಂದು ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೂಡ ಹೇಳಿದ್ದರು.
ಈ ಹಿಂದೆಯೂ ರಶ್ಮಿಕಾ ಅವರು ಕನ್ನಡದ ಅನೇಕ ನಟರ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳುವುದಾಗಲಿ, ಅಥವಾ ನಿಧನರಾದಾಗ ಶಾಂತಿ ಕೋರುವುದಾಗಲಿ ಮಾಡದೇ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದರು. ಇವತ್ತು ಕೂಡ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಒಳ್ಳೆಯ ಹೃದಯವಿರುವ ವ್ಯಕ್ತಿಯ ಋಣದಲ್ಲಿದ್ದೀರಿ ಎಂದು ಹಲವರು ಬರೆದುಕೊಂಡಿದ್ದಾರೆ.
ಹಿಂದೆ ಈ ಜೋಡಿ ಪ್ರೀತಿಸುತ್ತಿದ್ದಾರೆ ಎಂದಾಗ ಅಭಿಮಾನಿಗಳು ಅದ್ಭುತ ಜೋಡಿ ಎಂದು ಬಣ್ಣಿಸಿದರು. ಹಾಗಾಗಿ ಎಂಗೇಜ್ಮೆಂಟ್ ಕೂಡ ಆಯಿತು. ವೈಯಕ್ತಿಕ ಕಾರಣಗಳಿಂದಾಗಿ ಇಬ್ಬರೂ ದೂರವಾದರು. ಇಷ್ಟಾದರೂ ರಕ್ಷಿತ್ ಒಂದು ದಿನವೂ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರಲಿಲ್ಲ. ಅವರಿಗೆ ಒಳ್ಳೆಯದನ್ನೇ ಬಯಸಿದ್ದಾರೆ. ಹಾಗಾಗಿ ಇವತ್ತೊಂದು ಶುಭಾಶಯವನ್ನು ರಶ್ಮಿಕಾ ಹೇಳಬೇಕಿತ್ತು ಎನ್ನುವುದು ರಕ್ಷಿತ್ ಅಭಿಮಾನಿಗಳ ಆಸೆಯಾಗಿತ್ತು.
ಇನ್ನೂ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದೂರವಾದ ನಂತರ ಯಾವತ್ತೂ ರಶ್ಮಿಕಾ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದವರಲ್ಲ ರಕ್ಷಿತ್ ಶೆಟ್ಟಿ. ಮೊನ್ನೆಯಷ್ಟೇ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ಬಗ್ಗೆ ಮಾತನಾಡುತ್ತಾ, ಅವರ ಬೆಳವಣಿಗೆ ಖುಷಿ ತಂದಿದೆ ಎಂದಿದ್ದರು.