Thursday, February 13, 2025
Homeಕರಾವಳಿಕನ್ಯಾಡಿ: ಬಡ ಕುಟುಂಬಕ್ಕೆ ವಾಹನ ಸೌಲಭ್ಯ ನೀಡಿದ ರಾಜಕೇಸರಿ ಸಂಘಟನೆ

ಕನ್ಯಾಡಿ: ಬಡ ಕುಟುಂಬಕ್ಕೆ ವಾಹನ ಸೌಲಭ್ಯ ನೀಡಿದ ರಾಜಕೇಸರಿ ಸಂಘಟನೆ

spot_img
- Advertisement -
- Advertisement -

ಉಜಿರೆ: ಬೆಳ್ತಂಗಡಿ ತಾಲೂಕಿನ ಕನ್ಯಾಡಿ-2 ರ ದೆಕ್ಕಲಕೋಡಿ ನಿವಾಸಿ ಶಾಂತಪ್ಪ ಎಂಬವರು ಗಂಟಲು ನೋವಿನಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಜಯಪ್ರಕಾಶ್ ಕನ್ಯಾಡಿ ಇವರು ಬೆಲ್ತಂಗಡಿಯ ರಾಜಕೇಸರಿ ಸಂಘಟನೆಗೆ ಮಾಹಿತಿ ಮುಟ್ಟಿಸಿದ್ದಾರೆ.
ಇವರ ತುರ್ತು ಕರೆಗೆ ಸ್ಪಂದಿಸಿದ ರಾಜಕೇಸರಿ ಸಂಘಟನೆ ಶಾಂತಪ್ಪರ ಮನೆಗೆ ಆಗಮಿಸಿ, ರಾಜಕೇಸರಿ ಸಂಘಟನಾ ಕಾರಿನಲ್ಲಿ ತುರ್ತು ಚಿಕಿತ್ಸೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದೆ.
ಹಾಗೆಯೆ ಎರಡು ದಿನದ ಆಸ್ಪತ್ರೆಗೆ ಹೋಗಿ ಬರುವ ವಾಹನ ವ್ಯವಸ್ಥೆಯನ್ನು ಕೂಡ ರಾಜ ಕೇಸರಿ ಸಂಘಟನೆ ನೀಡಿ ಹೃದಯ ವೈಶಾಲತೆ ಮೆರೆದಿದ್ದಾರೆ.

- Advertisement -
spot_img

Latest News

error: Content is protected !!