Thursday, April 17, 2025
Homeತಾಜಾ ಸುದ್ದಿಬಿಸಿಲ ಬೇಗೆ ದೂರ ಮಾಡಿದ ಮಳೆ: ಗುಡುಗು ಸಹಿತ ವರ್ಷಧಾರೆ

ಬಿಸಿಲ ಬೇಗೆ ದೂರ ಮಾಡಿದ ಮಳೆ: ಗುಡುಗು ಸಹಿತ ವರ್ಷಧಾರೆ

spot_img
- Advertisement -
- Advertisement -

ರಾಜ್ಯದ ಹಲವೆಡೆ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದೆ. ಬೆಳಗ್ಗೆಯಿಂದಲೂ ಭಾರೀ ಬಿಸಿಲು ಇದ್ದ ವಾತಾವರಣದಲ್ಲಿ ಮಧ್ಯಾಹ್ನದ ನಂತರ ಬದಲಾಗಿ ಗುಡುಗು ಸಹಿತ ಮಳೆಯಾಗಿದೆ.

ಮಲೆನಾಡು ಭಾಗದ ಶಿವಮೊಗ್ಗ, ಭದ್ರಾವತಿ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ತಾಪಮಾನದ ನಿರಂತರ ಹೆಚ್ಚಳ ಮತ್ತು ಆರ್ದ್ರತೆ ಹೆಚ್ಚು ಕಡಿಮೆಯಾಗಿ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಅಂತೆಯೇ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ರಾಯಚೂರು, ಯಾದಗಿರಿ, ಕೊಪ್ಪಳ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು, ಚಿಕ್ಕಬಳ್ಳಾಪುರ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಏಪ್ರಿಲ್ 7, 8 ರಂದು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

- Advertisement -
spot_img

Latest News

error: Content is protected !!