- Advertisement -
- Advertisement -
ಉಡುಪಿ: ಆರೋಪ ಮಾಡಿ, ಆದರೆ ಸತ್ಯಕ್ಕೆ ಅಪಚಾರ ಮಾಡಬೇಡಿ ಸಿದ್ದರಾಮಯ್ಯನವರೇ ಎಂದು ಹೇಳಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ,ನನ್ನ ಎರಡು ಇಲಾಖೆಯಲ್ಲಿ ಭ್ರಷ್ಟಾಚಾರ ಝೀರೋ ಪರ್ಸೆಂಟ್ ಗೆ ಬರಬೇಕು. ಕಮಿಷನ್ ಆರೋಪಗಳಿದ್ದರೆ ನನ್ನನ್ನು ತನಿಖೆಗೆ ಒಳಪಡಿಸಿ. ನಾನು ಬಡಿದಾಡಿಕೊಳ್ಳುತ್ತಿದ್ದೇನೆ ಎಂದು ಸಚಿವ ಕೋಟ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು ,ಹಿಂದೆ ಕಾರ್ಯನಿರ್ವಹಿಸಿದ ಮುಜರಾಯಿ, ಮೀನುಗಾರಿಕೆ, ಬಂದರು ಇಲಾಖೆ ಮತ್ತು ಈಗ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ.. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರವಿದ್ದರೆ ಹೇಳಿ ,ನಾನು ತನಿಖೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.
- Advertisement -