- Advertisement -
![]()
- Advertisement -
ಬೆಳ್ತಂಗಡಿ :ಗ್ರೇಡ್ -1 ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಅಗಿದ್ದ ಪೃಥ್ವಿ ಸಾನಿಕಂ ಅವರನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ತಹಶೀಲ್ದಾರ್ ಅಗಿ ವರ್ಗಾವಣೆ ಮಾಡಲಾಗಿದೆ. ಇನ್ನೂ ಬೆಳ್ತಂಗಡಿ ತಹಶೀಲ್ದಾರ್ ಆಗಿ ಯಾರನ್ನು ನೇಮಕ ಮಾಡಿಲ್ಲ.

ಮೈಸೂರು ಜಿಲ್ಲೆಯ ಪೃಥ್ವಿ ಸಾನಿಕಂ 2022 ಜೂನ್ 28 ರಿಂದ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಂದ ಉತ್ತಮ ಹಾಗೂ ದಕ್ಷ ಅಧಿಕಾರಿ ಎಂಬ ಹೆಸರನ್ನು ಪೃಥ್ವಿ ಸಾನಿಕಂ ಪಡೆದುಕೊಂಡಿದ್ದರು.
ಕಂದಾಯ ಇಲಾಖೆಯಲ್ಲಿ ಒಟ್ಟು 38 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲ ಜ.31 ರಂದು ಆದೇಶ ಹೊರಡಿಸಿದ್ದಾರೆ.
- Advertisement -


