Sunday, June 29, 2025
Homeಚಿಕ್ಕಮಗಳೂರುಸುಪ್ರಭಾತಕ್ಕೆ ತೆರಳುತ್ತಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ: ಹಿಂದೂಗಳ ಗಾಡಿಯನ್ನ ಬಾಡಿಗೆಗೆ ತಂದಿದ್ದ ಮುಸ್ಲಿಂ ವ್ಯಕ್ತಿ

ಸುಪ್ರಭಾತಕ್ಕೆ ತೆರಳುತ್ತಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ: ಹಿಂದೂಗಳ ಗಾಡಿಯನ್ನ ಬಾಡಿಗೆಗೆ ತಂದಿದ್ದ ಮುಸ್ಲಿಂ ವ್ಯಕ್ತಿ

spot_img
- Advertisement -
- Advertisement -

ಚಿಕ್ಕಮಗಳೂರು :ಮಲೆನಾಡ ಭಾಗದಲ್ಲಿ ನಿರಂತರವಾಗಿ ಗೋವುಗಳ ಕಳ್ಳಸಾಗಣೆ ನಡೆಯುತ್ತಿರುವ ಪ್ರಕರಣ ಹೆಚ್ಚುತ್ತಿವೆ. ನಗರದಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹಸು-ಕರು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಒಪ್ಪಿಸಿರುವ ಘಟನೆ ನಡೆದಿದೆ.

ಬೆಳ್ಳಂಬೆಳಿಗ್ಗೆ ಗೋವುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಟ ಮಾಡುವ ವೇಳೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಕೈಗೆ ಗೋಕಳ್ಳರು ಸಿಕ್ಕಿಬಿದ್ದಿದ್ದಾರೆ. ಚಿಕ್ಕಮಗಳೂರು ನಗರದ ಶಂಕರಪುರದ ಕೊಂಗನಾಟಮ್ಮ ದೇಗುಲದಲ್ಲಿ ಸುಪ್ರಭಾತದ ಪೂಜೆಗೆ ತೆರಳುತ್ತಿದ್ದ ವೇಳೆಯಲ್ಲಿ ಅನುಮಾನ ಬರುವ ರೀತಿಯಲ್ಲಿ ವಾಹನದಲ್ಲಿ ಇದ್ದವರು ವರ್ತನೆ ಮಾಡಿದ್ದಾರೆ. ತಕ್ಷಣ ಕಾರ್ಯಕರ್ತರು ಪಿಕಪ್ ಆಟೋ ವನ್ನು  ಪರಿಶೀಲನೆ ನಡೆಸಿದ್ದಾರೆ. ಆಗ ಹಸು ಕರು ಪತ್ತೆ ಆಗಿದೆ.

ಇದನ್ನು ನೋಡಿದ ಕಾರ್ಯಕರ್ತರು ಆಕ್ರೋಶಗೊಂಡು ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಅಂಬಳೆಗ್ರಾಮದ ರೈತರ ಬಳಿ ದುಡ್ಡು ಕೊಟ್ಟು ಸಾಕಲು ತಂದಿರುವುದಾಗಿ ಉತ್ತರ ನೀಡಲು ಮುಂದಾಗಿದ್ದಾರೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಜಿತ್ ಶೆಟ್ಟಿ ವಾಹನದ ಪತ್ರಗಳನ್ನು ಪರಿಶೀಲನೆ ಮಾಡಿದ್ದಾಗ ವಾಹನ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ಇದೆ. ಈ ಬಗ್ಗೆ ಅನುಮಾನಗೊಂಡು ಚಾಲಕನನ್ನು ಪ್ರಶ್ನೆ ಮಾಡಿದ್ದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಹಸು ಕರುವನ್ನು ಕಸಾಯಿಖಾನೆಗೆ ಸಾಗಿಸಿಲು ತಂದಿರುವುದಾಗಿ ಒಪ್ಪಿಕೊಂಡಿದ್ದೇನೆ.

- Advertisement -
spot_img

Latest News

error: Content is protected !!