- Advertisement -
- Advertisement -
ಬಂಟ್ವಾಳ; 25 ವರ್ಷಗಳ ಇತಿಹಾಸ ಇರುವ ಶ್ರೀ ವಿಷ್ಣು ಮೂರ್ತಿ ಮಿತ್ರ ಮಂಡಳಿ (ರಿ ) ಮಾಡ ಬಡಗಕಜೆಕಾರು ಬಂಟ್ವಾಳ ತಾಲೂಕು ,ಮಂಡಳಿಗೆ ಬಡಗಕಜೆಕಾರು ಗ್ರಾಮದ ಹಿಂದೂ ರುದ್ರ ಭೂಮಿ ಮಾಡ ಬದಿಯ ಸರ್ವೆ ನಂಬರ್ 80/4 p1 ಸರಕಾರಿ ಜಾಗದಲ್ಲಿ 5 ಸೆಂಟ್ಸ್ ಜಾಗ ನಿಗದಿಯಾಗಿದ್ದು ಗಡಿ ಗುರುತು ಆಗಿದೆ ಸದ್ಯ ಜಾಗ ಮಂಡಳಿಯ ಸ್ವಾಧೀನದಲ್ಲಿದ್ದು ಇದಕ್ಕೆ ಸದಸ್ಯರು ಬೇಲಿ ಹಾಕಿ ಭದ್ರತೆ ಮಾಡಿದ್ದರು. ಇದನ್ನ ಸಹಿಸದ ದುಷ್ಟ ಶಕ್ತಿಗಳು 2 ಸಲ ಬೇಲಿಯನ್ನ ಕಿತ್ತು ಹಾಕಿ ಅನ್ಯಾಯ ಮಾಡಿದ್ದಾರೆ ,ಪದೇ ಪದೇ ಈ ಕಿತಾಪತಿ ಮಾಡುವ ವ್ಯಕ್ತಿ ಗಳು ಯಾರು ಗೊತ್ತಾಗಬೇಕು,ಇವರಿಗೆ ಸೂಕ್ತ ಶಿಕ್ಷೆ ದೈವ ನೀಡಬೇಕು ಎಂದು ಮಂಡಳಿಯ ಆರಾಧ್ಯ ದೈವ ವಿಷ್ಣು ಮೂರ್ತಿ ದೈವದಲ್ಲಿ ಪ್ರಾರ್ಥನೆ ಇಂದು ಸದಸ್ಯರ ಸಮ್ಮುಖದಲ್ಲಿ ಮಾಡಲಾಯಿತು.
- Advertisement -