- Advertisement -
- Advertisement -
ಮಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಜಟ್ಕಾ ಕಟ್ ಮುಂದುವರಿಸಿ ಹಲಾಲ್ ಕಟ್ ಬಹಿಷ್ಕರಿಸಿ ಅಭಿಯಾನ ಮಾಡುತ್ತೇವೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುತಾಲಿಕ್, ಕಳೆದ ಯುಗಾದಿಯಲ್ಲಿ ಹಲಾಲ್ ಕಟ್ ಬಹಿಷ್ಕರಿಸಿ ಅಭಿಯಾನ ಮಾಡಿದ್ವಿ. ಅಂತೆಯೇ ಈ ವರ್ಷವೂ ಅಭಿಯಾನ ಮುಂದುವರೆಸುತ್ತೇವೆ. ಹಲಾಲ್ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಹಲಾಲ್ ಇಸ್ಲಾಂಗೆ ಸಂಬಂಧಿಸಿದ್ದು. ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳು ಜಟ್ಕಾಕಟ್ ಮಾಡಿದ ಮಾಂಸ ತಿನ್ನಲ್ಲ. ಹಾಗಿದ್ಮೇಲೆ ಹಿಂದೂಗಳೇಕೆ ಹಲಾಲ್ ಮಾಂಸವನ್ನು ತಿನ್ನಬೇಕು ಎಂದು ಪ್ರಶ್ನಿಸಿದ್ರು.
- Advertisement -