Monday, June 30, 2025
Homeಜ್ಯೋತಿಷ್ಯಭಾನುವಾರದ ಭವಿಷ್ಯ; ಇಂದಿನ ಭವಿಷ್ಯ ಯಾರ್ಯಾರಿಗೆ ಒಳಿತು?

ಭಾನುವಾರದ ಭವಿಷ್ಯ; ಇಂದಿನ ಭವಿಷ್ಯ ಯಾರ್ಯಾರಿಗೆ ಒಳಿತು?

spot_img
- Advertisement -
- Advertisement -

ಮೇಷ: ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವದು.


ವೃಷಭ: ಅನಿರೀಕ್ಷಿತ ಧನಲಾಭವಾಗುವದು. ಬುದ್ಧಿಕೌಶಲ್ಯದಿಂದ ಉದ್ಯೋಗದಲ್ಲಿ ಬಡ್ತಿ ಕಂಡುಬರುವದು. ಸಿಟ್ಟಿನ ಸ್ವಭಾವದಿಂದ ತೊದರೆಯಾಗುವ ಸಾಧ್ಯತೆ ಇದೆ. ಕಾರ್ಯಕ್ಷಮತೆಗೆ ತಕ್ಕ ಫಲ ದೊರೆಯುವದು.


ಮಿಥುನ:ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆಯು ಅನುಭವಕ್ಕೆ ಬಂದಲ್ಲಿ ತಕ್ಷಣವೇ ವೈದ್ಯರನ್ನು ಬೇಟಿಮಾಡಿ. ನಿಮ್ಮ ಉದಾರ ಮನೋಭಾವ ನಿಮಗೆ ಅನುಕೂಲ ಒದಗಿಸಲಿದೆ. ಸ್ನೇಹಿತರೊಂದಿಗಿನ ಸಮಯ ಮನಸ್ಸಿಗೆ ಉಲ್ಲಾಸ ತರಲಿದೆ. ಬರಹಗಾರರಿಗೆ ಶುಭ ದಿನ.


ಕಟಕ:ಬದಲಾದ ಸನ್ನಿವೇಷಕ್ಕೆ ಒಗ್ಗಿಕೊಳ್ಳ ಬೇಕಾದ ಅನಿವಾರ್ಯತೆಯ ಸ್ಥಿತಿಯು ಎದುರಾಗುತ್ತದೆ. ಯೋಜನೆಯ ಬೆಳವಣಿಗೆಯಲ್ಲಿ ಸಂಬಂಧಿಸಿದವರೊಂದಿಗೆ ಚರ್ಚೆ ನೆಡೆಸದೇ ಯಾವ ತೀರ್ಮಾನಗಳಿಗೂ ಬರುವುದು ಸರಿಯಲ್ಲ. ಶಿರೋ ವೇದನೆಯು ಕಾಡಲಿದೆ.


ಸಿಂಹ :ಇಂದು ವೈಯಕ್ತಿಕ ಸಂಬಂಧಗಳು ಪ್ರೀತಿ ಮತ್ತು ಸಹಕಾರದಿಂದ ಕೂಡಿರುತ್ತದೆ. ಉತ್ತಮ ಆರೋಗ್ಯದಿಂದ, ನೀವು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಜೊತೆಯಲ್ಲಿ, ನಿಮ್ಮ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ನಿಮಗೆ ಸಾಧ್ಯವಾಗುತ್ತದೆ.

ಕನ್ಯಾ: ಉತ್ತಮ ಆಹಾರ ಸೇವನೆ , ಆರೋಗ್ಯದಲ್ಲಿ ವೃದ್ಧಿ , ಆರ್ಥಿಕ ಪರಿಸ್ಥಿತಿ ಉತ್ತಮ , ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಬಂಧು ಮಿತ್ರರಲ್ಲಿ ವಾತ್ಸಲ್ಯ ಪ್ರೀತಿ.


ತುಲಾ:ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸೌಲಭ್ಯವಿರಲಿದೆ. ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗಿರುವ ಹೆಚ್ಚಿನ ಲಾಭದಿಂದ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ವಿಮರ್ಶಿಸಿ. ಆರ್ಥಿಕ ಭದ್ರತೆಯಿಂದ ಕುಟುಂಬ ವ್ಯವಹಾರಗಳ ನಿರ್ವಹಣೆ ಸುಲಭವಾಗುವುದು.


ವೃಶ್ಚಿಕ :ಸಾಧನೆಯಲ್ಲಿ ಮೇಲುಗೈ ಸಾಧಿಸುವಿರಿ. ವ್ಯವಹಾರದಲ್ಲಿನ ಲಾಭವು ನಿಮ್ಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮಾನಸಿಕ ಸ್ಥಿತಿ ಏರುಪೇರಾದ ಸಮಯದಲ್ಲಿ ಹಿರಿಯರ ಸಲಹೆ ಸಮಾಧಾನ ತರಲಿದೆ.
ಧನು: ತಪ್ಪುಗಳನ್ನು ಸಮರ್ಥಿಸುವದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಅಧಿಕಾರಿಗಳ ಕಿರಿಕಿರಿಗೆ ಮಣಿಯದೇ ಧೈರ್ಯದಿಂದ ಕೆಲಸ ನಿರ್ವಹಿಸಿರಿ. ಮತ್ತೊಬ್ಬರ ಮೇಲೆ ಅತಿಯಾದ ವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ.

ಧನಸು: ನಿರೀಕ್ಷೆಗೆ ತಕ್ಕಂತೆ ಆದಾಯ, ಜನರ ಬೆಂಬಲ, ಕೃಷಿಕರಿಗೆ ಲಾಭ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ.


ಮಕರ: ವಿಶೇಷ ರೀತಿಯ ಕಾರ್ಯ ಒದಗಿ ಬಂದು ಸಂತಸ ಉಂಟಾಗುತ್ತದೆ. ಸ್ಥಾನಮಾನಗಳಿಗೂ ಕೊರತೆ ಇಲ್ಲ. ವಿಶೇಷ ವಸ್ತು ಸಂಗ್ರಹ. ಅನಾರೋಗ್ಯ್ಗ ತೋರಿಬಂದು ಕಿರಿಕಿರಿ ಎನಿಸಬಹುದು.


ಕುಂಭ: ಅಲ್ಪ ತ್ರಾಸದಾಯಕ. ಗಡಿಬಿಡಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಸಂಭವ. ಮಹತ್ವದ ಕೆಲಸಗಳನ್ನು ಮುಂದೂಡುವದು ಒಳ್ಳೆಯದು. ಮಂಗಲಕಾರ್ಯ, ಹೆಸರು, ಕಡಲೆ ದಾನ ಮಾಡಿರಿ.

ಮೀನ: ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ.

- Advertisement -
spot_img

Latest News

error: Content is protected !!