ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ಸೋಲಿನ ಕಡೆಗೆ ಮುಖ ಮಾಡಿ ನಡೆಯುತ್ತಿರುವಾಗಲೇ ಆಂತರಿಕ ತಿಕ್ಕಾಟಗಳು ಜೋರಾಗುತ್ತಿವೆ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮ ಕಥೆ ಪಕ್ಷದ ನಡೆ ಕುರಿತು ರೋಚಕ ಸುದ್ದಿ ಹೋರ್ ಹಾಕಿದೆ. 2014ರ ಚುನಾವಣಾ ಸೋಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾರಣ ಎಂದು ಣಬ್ ಮುಖರ್ಜಿ ಆತ್ಮಕತೆಯಲ್ಲಿ ಹೇಳಿದ್ದಾರೆ. ಎಂದು ಮಾಹಿತಿ ಹೊರಬಿದ್ದಿದೆ.
ಕಳೆದ ಆಗಸ್ಟ್ನಲ್ಲಿ ನಿಧನರಾದ ಪ್ರಣಬ್ ಆತ್ಮಕತೆಯ್ಲಲಿ ಹೇಳಲಾಗಿದೆ ಎಂಬ ಸಾಲುಗಳು ಈಗ ಚರ್ಚೆಗೆ ಗ್ರಾಸವಾಗಿದೆ.ಅವರು “ನಾನು ಪ್ರಧಾನಿಯಾಗಿದ್ದಿದ್ದರೆ, ಕಾಂಗ್ರೆಸ್ ಪಕ್ಷ ಸೋಲುತ್ತಿರಲಿಲ್ಲ ಎಂಬ ಅಭಿಪ್ರಾಯ ಪಕ್ಷದ ಕೆಲ ಸದಸ್ಯರಲ್ಲಿತ್ತು, ಸೋನಿಯಾಗಾಂಧಿ ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಅಸಮರ್ಥರಾಗಿದ್ದರು,ಡಾ.ಮನಮೋಹನ ಸಿಂಗ್ ಪಕ್ಷ ಚಟುವಟಿಕೆ ಬಿಟ್ಟು ಬಿಟ್ಟರು” ಎಂದೂ ಅವರು ಬರೆದುಕೊಂಡಿದ್ದಾರೆ. ಎಂದು ಹೇಳಲಾಗಿದೆ. ಇಂತಹ ಹಲವು ವಿಷಯ ಈ ಕೃತಿಯಲ್ಲಿದೆ ಎಂದು ಮಾಹಿತಿ ಹೊರಬಿದ್ದಿದೆ.
ಕೃತಿ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು ಸಹಜವಾಗಿಯೇ ಜನ ಕುತೂಹಲ ಹೊಂದಿದ್ದಾರೆ. ಎಲ್ಲ ಕಾಂಗ್ರೆಸ್ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿದ್ದು 2012ರಲ್ಲಿ ರಾಷ್ಟ್ರಪತಿಯಾದ ಪ್ರಣಬ್ ಕಾಂಗ್ರೆಸ್ ವಿರುದ್ಧ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದು ನಿಜವೇ? ಅದರ ಸಾರ ತಿಳಿಯಲು ಜನ ಉತ್ಸುಕರಾಗಿದ್ದಾರೆ.