ಬೆಂಗಳೂರು;ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ತಮ್ಮ ಡೈಲಾಗ್ ಡೆಲಿವರಿಯಿಂದಲೇ ಸಖತ್ ಫೇಮಸ್ ಆಗಿರುವ ಪ್ರದೀಪ್ ಈಶ್ವರ್ ನಿನ್ನೆ ಅಧಿವೇಶನದಲ್ಲಿ ನಗೆಪಾಟಲಿಗೆ ಈಡಾದ್ರು. ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋ ಎದುರು ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಒಂದು ಸಾವಿಗೆ ಇವರು ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು, ಅವರಿಗೂ ನ್ಯಾಯ ಕೊಡಿಸಲು ಹೋರಾಟ ಮಾಡಬೇಕಲ್ಲ ಎಂದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ , ಎ ..ಪ್ರದೀಪ್..ಸಾವು ಆಗಲಿಲ್ಲ ಮಾರಾಯ .ಕೂತ್ಕೋ ನೀನು ಎಂದು ಮಂಗಳೂರು ಶೈಲಿಯಲ್ಲಿ ಹೇಳಿದ್ದಾರೆ. ಆ ಪ್ರದೀಪ್ ಈಶ್ವರ್ ಗೆ ತನ್ನ ಯಡವಟ್ಟು ಗೊತ್ತಾಗಿದೆ. ಪ್ರದೀಪ್ ಪಕ್ಕದಲ್ಲೇ ಗೊತ್ತಿದ್ದ ಶಾಸಕಿ ನಯನಾ ಮೋಟಮ್ಮ ಕೂಡ ಪ್ರದೀಪ್ ಗೆ ಬೆಂಬಲ ನೀಡಿದ್ದಾರೆ. ಪ್ರದೀಪ್ ಈಶ್ವರ್ ಯಡವಟ್ಟು ಗೊತ್ತಾಗುತ್ತಲೇ ಅವರು ಕೂಡ ಸುಮ್ಮನಾಗಿದ್ದಾರೆ.

ತನ್ನ ಸಿನಿಮೀಯ ಸ್ಟೈಲ್ ನ ಡೈಲಾಗ್ ನಿಂದಲೇ ಫೇಮಸ್ ಆಗಿರುವ ಪ್ರದೀಪ್ ಈಶ್ವರ್ ಅವರಿಗೆ ಸ್ಪೀಕರ್ ಯು ಟಿ ಖಾದರ್ ಮಂಗಳೂರು ಶೈಲಿಯಲ್ಲೇ ಕೌಂಟರ್ ಕೊಟ್ಟು ಸುಮ್ಮನೆ ಕೂರಿಸಿದ್ದು ಇದೀಗ ಸಖತ್ ವೈರಲ್ ಆಗಿದ್ದು ಸ್ಪೀಕರ್ ರಾಕ್, ಪ್ರದೀಪ್ ಶಾಕ್ ಅನ್ನುವಂತಾಗಿದೆ.