Friday, June 27, 2025
Homeತಾಜಾ ಸುದ್ದಿಹಾಸನಾಂಬೆ ದೇಗುಲದಲ್ಲಿ ಪವರ್ ಶಾಕ್; 17 ಭಕ್ತರು ಅಸ್ವಸ್ಥ

ಹಾಸನಾಂಬೆ ದೇಗುಲದಲ್ಲಿ ಪವರ್ ಶಾಕ್; 17 ಭಕ್ತರು ಅಸ್ವಸ್ಥ

spot_img
- Advertisement -
- Advertisement -

 

ಹಾಸನ: ಹಾಸನಾಂಬೆ  ದೇಗುಲದಲ್ಲಿ  ದರ್ಶನದ ವೇಳೆ ಕರೆಂಟ್ ಶಾಕ್ ಹೊಡೆದು 17 ಭಕ್ತರು ಅಸ್ವಸ್ಥರಾಗಿದ್ದಾರೆ . ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ಈ ಘಟನೆಯ ಬಳಿಕ, ಹಾಸನದ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಮಾಹಿತಿ ಪಡೆದ ಬಳಿಕ, ಅಸ್ವಸ್ಥರಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತವರ ಆರೋಗ್ಯವನ್ನು ವಿಚಾರಿಸಿದರು.ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಶಾಕ್ ಹೊಡೆದಿರೋದು ನಿಜ. ಕರೆಂಟ್ ಶಾಕ್ ನಿಂದ ನೂಕು ನುಗ್ಗಲು ಉಂಟಾಗಿದೆ. ಇದರಿಂದ ಹಲವರಿಗೆ ಗಾಯಗಳಾಗಿದ್ದಾವೆ ಎಂದು ಹೇಳಿದರು. ವಿದ್ಯುತ್ ಶಾಕ್ ನಿಂದ 17 ಜನರು ಅಸ್ವಸ್ಥರಾಗಿದ್ದಾರೆ. ಅವರೆಲ್ಲ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆರೋಗ್ಯವಾಗಿದ್ದು, ಕರೆಂಟ್ ಶಾಕ್ ನಿಂದ ಓರ್ವ ಯುವತಿ ಅಸ್ವಸ್ಥಗೊಂಡಿದ್ದಾರೆ. ಆದ್ರೇ ಯಾವುದೇ ಸಮಸ್ಯೆ ಇಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

 

- Advertisement -
spot_img

Latest News

error: Content is protected !!