- Advertisement -
- Advertisement -
ದಾವಣಗೆರೆ: ಬಟ್ಟೆ ಒಣಗಿಸಲು ಹಾಕುವಾಗ ವಿದ್ಯುತ್ ತಗುಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆ ಬಾವಿಹಾಳು ಗ್ರಾಮದಲ್ಲಿ ನಡೆದಿದೆ.
ಬಿ.ಆರ್.ರವಿಶಂಕರ್(35)ಮತ್ತು ನಾಗವೇಣಿ(32)ಮೃತ ದಂಪತಿ.
ನಾಗವೇಣಿ ಅವರು ಮನೆ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ತಂತಿಗೆ ಬಟ್ಟೆ ಒಣ ಹಾಕುತ್ತಿದ್ದರು.ಈ ವೇಳೆ ವಿದ್ಯುತ್ ತಗುಲಿದಾಗ ಕೂಗಿಕೊಂಡಿದ್ದಾರೆ.ಓಡಿ ಬಂದ ರವಿಶಂಕರ್ ಪತ್ನಿ ನಾಗವೇಣಿಯನ್ನು ರಕ್ಷಿಸಲು ಯತ್ನಿಸುವಾಗ ಅವರು ಕೂಡ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ.
- Advertisement -