- Advertisement -
- Advertisement -
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ 9 ನೇ ತರಗತಿ ಓದುತ್ತಿದ್ದ 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿರುವ ಬಗ್ಗೆ ವೇಣೂರು ಠಾಣೆಯಲ್ಲಿ 28-06-2021 ರಂದು ದೂರದ ಸಂಬಂಧಿಯಾದ ನಾಲ್ಕೂರು ಗ್ರಾಮದ ನಿವಾಸಿ ಪ್ರಶಾಂತ್(33) ವಿರುದ್ದ ಬಾಲಕಿ ಮನೆಯರು ದೂರು ನೀಡಿದ್ದರು.
ಅಪ್ರಾಪ್ತ ಯುವತಿಯ ಪರಿಚಯ ಮಾಡಿಸಿಕೊಡ ಪ್ರಶಾಂತ್ ಆಕೆ ಸಂಬಂಧಿ ಮನೆಗೆ ಹೋಗುತ್ತಿದ್ದಾಗ ಅಪಹರಿಸಿದ್ದಾನೆ ಎಂದು ದೂರು ದಾಖಲಾಗಿತ್ತು ಇದೀಗ ಆರೋಪಿಯನ್ನು ಮತ್ತು ಬಾಲಕಿಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದು ಪ್ರಶಾಂತ್ ನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿ ನಂತರ ಅಪಹರಣ ಮತ್ತು ಫೋಕ್ಸೋ ಅಡಿಯಲ್ಲಿ ವೇಣೂರು ಪೊಲೀಸರು ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದಾರೆ.
- Advertisement -