- Advertisement -
- Advertisement -
ಮಂಗಳೂರು; ಗಣೇಶೋತ್ಸವ ಬಂದೋಬಸ್ತ್ ನಲ್ಲಿರುವಾಗ ಅಸ್ವಸ್ಥಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ನಿಧನವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಚಂದ್ರ ಕೆ. ಅಡೂರು(49) ಮೃತ ದುರ್ದೈವಿ.
ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯ ಡ್ಯೂಟಿಯಲ್ಲಿದ್ದಾಗ ಅವರು ಬಳಿಕ ಏಕಾಏಕಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಶನಿವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಚಂದ್ರ ಅಡೂರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದು ಅಂತ್ಯಕ್ರಿಯೆ ಹುಟ್ಟೂರು ಕಾಸರಗೋಡಿನ ಅಡೂರಿನಲ್ಲಿ ನಡೆಯಿತು.
- Advertisement -