- Advertisement -
![]()
- Advertisement -
ಉತ್ತರ ಪ್ರದೇಶ: ಕರೊನಾ ವೈರಸ್ನ ಹಾವಳಿಯ ಮಧ್ಯೆ ಜನ ಸ್ವಚ್ಛತೆಗೆ ಸಾಕಷ್ಟು ನೀಡುತ್ತಿದ್ದಾರೆ. ಇಲ್ಲಿನ ಮನೆಯೊಂದರ ಪಕ್ಕ ರಾಹುಲ್ ಸಿಂಗ್ ಎಂಬುವರು ಉಗುಳಬೇಡಿ ಎಂದು ಬುದ್ಧಿಮಾತು ಹೇಳಿದ್ದಕ್ಕೆ, ಧರಂಪಾಲ್ ಸಿಂಗ್ ಎಂಬಾತ ಇವರ ಮನೆಯಲ್ಲಿದ್ದ 11 ಪಾರಿವಾಳಗಳನ್ನು ಕೊಲೆ ಮಾಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಭಾಗ್ಪಾಟದಲ್ಲಿ ನಡೆದಿದೆ.
ಧರಂಪಾಲ್, ರಾಹುಲ್ ಅವರ ಮನೆಯ ಪ್ರವೇಶದ್ವಾರದಲ್ಲಿ ಉಗುಳಿದ್ದ. ಇದರಿಂದ ಸಿಟ್ಟುಗೊಂಡ ಧರಂಪಾಲ್, ಹೀಗೆ ಉಗುಳುವುದು ಸರಿಯಲ್ಲ, ಅದರಲ್ಲಿಯೂ ಕರೊನಾ ವೈರಸ್ನ ಈ ದಿನಗಳಲ್ಲಿ ಇಂಥ ಕೃತ್ಯ ನಿಷೇಧ ಎಂದಿದ್ದಾರೆ. ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ.
- Advertisement -


