- Advertisement -
- Advertisement -
ಸುಳ್ಯ: ವಿವಾಹಿತ ಮಹಿಳೆಯೊಂದಿಗೆ ಗುಡ್ಡೆಯಲ್ಲಿ ಚೆಲ್ಲಾಟವಾಡುತ್ತಿದ್ದ ಸಮಯದಲ್ಲಿ ಬಿಜೆಪಿ ಮುಖಂಡನೋರ್ವ ಧರ್ಮದೇಟು ತಿಂದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಿಂದ ವರದಿಯಾಗಿದೆ.
ಸುಳ್ಯ ಶಾಸಕರ ಮಾಜಿ ಆಪ್ತ ಕಾರ್ಯದರ್ಶಿ ಎನ್ನಲಾದ ಹಾಗೂ ಬಿಜೆಪಿಯಲ್ಲಿ ಸಕ್ರಿಯವಾಗಿರುವ ವ್ಯಕ್ತಿಯೋರ್ವ ವಿವಾಹಿತ ಮಹಿಳೆಯೊಬ್ಬರ ಜತೆ ಗುಡ್ಡೆಯಲ್ಲಿ ಇರುವುದನ್ನು ಕಂಡ ಆ ಮಹಿಳೆಯ ಪತಿಯ ಸಹೋದರ ಕೈಯಲ್ಲಿದ್ದ ದೊಣ್ಣೆಯಿಂದ ಅವರಿಗೆ ಬಾರಿಸಿದರೆಂದೂ ಗಾಯಗೊಂಡ ಅವರು ಓಡಿ ತಪ್ಪಿಸಿಕೊಡರೆಂದೂ ಹೇಳಲಾಗಿದೆ.
ಅನೈತಿಕ ಸಂಬಂಧ ದ ವಿರುದ್ಧ ಈ ಹಿಂದೆಯೂ ಹಲವು ಬಾರಿ ಎಚ್ಚರಿಕೆ ನೀಡಿದರೂ ಬೆಲೆ ನೀಡದೆ ಚಾಳಿ ಮುಂದುವರಿಸಿದ್ದ. ಇವರ ಸರಸ ಸಲ್ಲಾಪದಿಂದ ರೋಸಿ ಹೋಗಿದ್ದ ಪತಿಯ ಸಹೋದರ, ಈ ಬಾರಿ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೋದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಎನ್ನಲಾಗಿದೆ.
- Advertisement -