- Advertisement -
- Advertisement -
ಕಾರ್ಕಳ: ಬೆಳ್ಮಣ್ ನಲ್ಲಿ ಪೇಟೆಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದವರು
ಪ್ರಶಾಂತ್ ಕಾಮತ್ ( 35 ) .
ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು , ಪ್ರತಿದಿನ ಮನೆಯಿಂದ ಬೆಳ್ಮಣ್ ಪೇಟೆಗೆ ಹೋದವರು ಗೆಳೆಯರೊಂದಿಗೆ ಮಾತನಾಡಿಕೊಂಡು ಮನೆಗೆ ಹಿಂತಿರುಗುತ್ತಿದ್ದರು.
ಆದರೆ ತಮ್ಮ ಮನೆಯಿಂದ ಬೆಳ್ಮಣ್ ಪೇಟೆ ಕಡೆ ಹೋದವರು ವಾಪಾಸ್ಸು ಬಂದಿರುವುದಿಲ್ಲ. ಇವರ ಬಗ್ಗೆ ಸಂಬಂಧಿಕರ ಹಾಗೂ ಇತರೆ ಕಡೆಗಳಲ್ಲಿ ಹುಡುಕಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ . ಈ ಬಗ್ಗೆ ನಾಪತ್ತೆಯಾಗಿರುವವರ ತಮ್ಮ ಪ್ರದೀಪ್ ಕಾಮತ್ ಎಂಬವರುನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -