Monday, May 13, 2024
Homeತಾಜಾ ಸುದ್ದಿಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಟ ಪವನ್ ಕಲ್ಯಾಣ್ ₹30 ಲಕ್ಷ ದೇಣಿಗೆ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಟ ಪವನ್ ಕಲ್ಯಾಣ್ ₹30 ಲಕ್ಷ ದೇಣಿಗೆ

spot_img
- Advertisement -
- Advertisement -

ತಿರುಪತಿ: ಟಾಲಿವುಟ್ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್​ ಕಲ್ಯಾಣ್​​​ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇದೇ ವೇಳೆ 1,10,00 ಡಿಡಿಯನ್ನು ತಿರುಪತಿಯಲ್ಲಿ ಆರ್​ಎಸ್​ಎಸ್​ ಮುಖಂಡಿರಿಗೆ ಹಸ್ತಾಂತರ ಮಾಡಿದ್ದಾರೆ.

ತಿರುಪತಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಪವನ್‌ ಕಲ್ಯಾಣ್‌ ಅವರು ಶುಕ್ರವಾರ ಭೇಟಿ ನೀಡಿದ್ದಾರೆ. ಆ ವೇಳೆಯಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ₹30 ಲಕ್ಷ ದೇಣಿಗೆ ನೀಡುವುದಾಗಿ ಪವನ್‌ ಕಲ್ಯಾಣ್‌ ಘೋಷಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಟ ಪವನ್ ಕಲ್ಯಾಣ್ ಅವರನ್ನು ಆರ್​​ಎಸ್​ಎಸ್​ ನಾಯಕರು ಹಾಗೂ ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್ ಭೇಟಿ ಮಾಡಿದ್ದರು. ಈ ವೇಳೆ ದೇಣಿಗೆ ಹಣ ಹಸ್ತಾಂತರ ಮಾಡಿ ಮಾತನಾಡಿದ ಪವನ್​ ಕಲ್ಯಾಣ್​, ಮಾನವಕುಲಕ್ಕೆ ತಾಳ್ಮೆ, ಶಾಂತಿ ಮತ್ತು ಧೈರ್ಯದ ಹಾದಿಯನ್ನು ಶ್ರೀರಾಮ ತೋರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಕ್ಕಾಗಿ ಮಂದಿರವನ್ನು ನಿರ್ಮಿಸಲಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಕಾರ್ಯಕ್ಕೆ ಸಾಮಾನ್ಯ ಜನರು ಕೂಡ ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಸದ್ಯ ಆರಂಭವಾಗಿದ್ದು, 36-40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ‘ಎಲ್‌ ಅಯಂಡ್‌ ಟಿ’ ನೋಡಿಕೊಳ್ಳುತ್ತಿದೆ.

- Advertisement -
spot_img

Latest News

error: Content is protected !!