ಸಾಂದರ್ಭಿಕ ಚಿತ್ರ
ಪುತ್ತೂರು: ಮೂರು ದಿನಗಳ ಹಿಂದೆಯಷ್ಟೇ ಕೇರಳಕ್ಕೆ ಅಕ್ರಮ ಗೋ ಸಾಗಾಟ ಪ್ರಕರಣವನ್ನು ಭೇದಿಸಿದ್ದ ಸಂಪ್ಯ ಎಸ್.ಐ ಉದಯ ರವಿ ಅವರು ಇದೀಗ ಮತ್ತೊಮ್ಮೆ ಅದೇ ಪರಿಸರದಲ್ಲಿ ಕೇರಳಕ್ಕೆ ಪಿಕಪ್ ಜೀಪಿನಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿ, ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಮಹಮ್ಮದ್ ಅವರ ಪುತ್ರ ಉಮ್ಮರ್ ಎ (38ವ), ಕಾಸರಗೋಡು ಮಂಜೇಶ್ವರ ಗ್ರಾಮದ ಬೈತಡ್ಕ ನಿವಾಸಿ ಜಗನ್ನಾಥ ಪೂಜಾರಿ(60ವ)ರವರು ಬಂಧಿತ ಆರೋಪಿಗಳು.
ಪಾಣಾಜೆ ಗ್ರಾಮದ ಆರ್ಲಪದವು-ಸ್ವರ್ಗ ರಸ್ತೆಯ ಚಂದ್ರಗಿರಿ ಎಂಬಲ್ಲಿ ಆರ್ಲಪದವು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವನ್ನು ತಪಾಸಣೆ ನಡೆಸಿದರು.ಈ ವೇಳೆ 2 ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಆರೋಪಿಗಳಾದ ಉಮ್ಮರ್ ಮತ್ತು ಜಗನ್ನಾಥ ಅವರಲ್ಲಿ ವಿಚಾರಿಸಿದಾಗ ಮಾಂಸ ಮಾಡುವ ಉದ್ದೇಶದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.