ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯದ ವೇಳೆ ಕಿರಿಕ್ ನಡೆದಿದೆ. ಕುಸ್ತಿ ಆಡುತ್ತಿದ್ದ ಕೊಲ್ಲಾಪುರದ ಪೈಲ್ವಾನ್ ಸಿದ್ದೇಶ್ವರ್ ಮೌಲಿ ಜಮದಾಳೆ ಮತ್ತು ಹರಿಯಾಣಾದ ಪೈಲ್ವಾನ್ ವಿಕಾಸ್ ನಡುವೆ ಕಿರಿಕ್ ನಡೆದಿದೆ.
ಹರಿಯಾಣಾ ಪೈಲ್ವಾನ್ ನ ಕೈಯನ್ನು ನಿಯಮ ಮೀರಿ ಕೊಲ್ಲಾಪುರ ಪೈಲ್ವಾನ್ ತಿರುವಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಇಬ್ಬರು ಪೈಲ್ವಾನರು ಕಾದಾಡಿದ್ದಾರೆ.
ಈ ವೇಳೆ ಪೈಲ್ವಾನರಿಗೆ ಪ್ಷೇಕ್ಷಕರಿಂದ ಆವಾಜ್ ಹಾಕಲ್ಪಟ್ಟಿದ್ದು, ಕೊಲ್ಲಾಪುರ ಪೈಲ್ವಾನ್ ಸಿದ್ದೇಶ್ವರ್ ಮೌಲಿ ಜಮದಾಳೆಯಿಂದ ಪ್ರೇಕ್ಷಕರಿಗೆ ವಾಪಾಸ್ ಆವಾಜ್ ಹಾಕಿದ್ದಾರೆ. ಒಂದು ಹಂತದಲ್ಲಿ ಕೆರಳಿದ ಪ್ರೇಕ್ಷಕರು ಕುಸ್ತಿ ಅಖಾಡಕ್ಕೆ ನುಗ್ಗಲು ಹೋಗಿದ್ದಾರೆ.
ಕೊನೆಗೆ ಅಖಾಡದಲ್ಲಿದ್ದ ಚಾಮರಾಜ ಶಾಸಕ ನಾಗೇಂದ್ರರಿಂದ ಇಬ್ಬರು ಪೈಲ್ವಾನ್ ರಿಗೆ ಎಚ್ಚರಿಕೆ ನೀಡಲ್ಪಟ್ಟಿದ್ದು, ಈ ವೇಳೆ ಕುಸ್ತಿ ಪಟು ಶಾಸಕರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೆ ಎಲ್ಲರನ್ನೂ ಸಮಾಧಾನಪಡಿಸಿದ ಆಯೋಜಕರು ವಾಪಸ್ ಅಖಾಡಕ್ಕೆ ಇಳಿಸಿದ್ದಾರೆ.