Sunday, June 29, 2025
Homeಕರಾವಳಿಕೋಟೇಶ್ವರ: ಚಿನ್ನ ಮತ್ತು ವಜ್ರಾಭರಣ ಪ್ರದರ್ಶನದಿಂದ ಆಭರಣ ಕಳವು –ಇಬ್ಬರು ಕಳ್ಳರ ಬಂಧನ !

ಕೋಟೇಶ್ವರ: ಚಿನ್ನ ಮತ್ತು ವಜ್ರಾಭರಣ ಪ್ರದರ್ಶನದಿಂದ ಆಭರಣ ಕಳವು –ಇಬ್ಬರು ಕಳ್ಳರ ಬಂಧನ !

spot_img
- Advertisement -
- Advertisement -

ಕೋಟೇಶ್ವರ: ಚಿನ್ನ ಮತ್ತು ವಜ್ರಾಭರಣ ಪ್ರದರ್ಶನದ ನಿಮಿತ್ತ ಕೋಟೇಶ್ವರದ ಯುವಿಎ ಮೆರಿಡಿಯನ್ ಹಾಲ್‌ನಲ್ಲಿ ಸ್ಟಾಲ್ ಹಾಕಿದ್ದ ಓರಾ ಫೈನ್ ಜ್ಯುವೆಲ್ಲರಿ ಕಂಪನಿಯಿಂದ ಚಿನ್ನಾಭರಣ ಕಳವು ಮಾಡಿದ್ದ ಪುಣೆಯ ಇಬ್ಬರು ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪುಣೆಯ ಹವೇಲಿ ತಾಲೂಕಿನ ಕೇಶವನಗರ ನಿವಾಸಿ ಧನರಾಜ್ ವಿಜಯ್ ಪರ್ಮಾರ್ (42) ಮತ್ತು ಅದೇ ಗ್ರಾಮದ ಅಜಯಸಿಂಗ್ ಕಿಶೋರಸಲಂಕೆ (23) ಎಂದು ಗುರುತಿಸಲಾಗಿದೆ.

ಪುಣೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪ್ರದರ್ಶನವು ನವೆಂಬರ್ 27 ರಿಂದ 29, 2020 ರವರೆಗೆ ನಡೆಯಿತು. ನವೆಂಬರ್ 29 ರಂದು, ಗ್ರಾಹಕರಂತೆ ಪೋಸ್ ನೀಡಿದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ, ಓರಾ ಫೈನ್ ಜ್ಯುವೆಲರಿ ಔಟ್ಲೆಟ್ಗೆ ಭೇಟಿ ನೀಡಿ ಎರಡು ಚಿನ್ನದ ಬಳೆಗಳನ್ನು ಕದ್ದಿದ್ದಾರೆ. ಅವರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳೆಗಳ ತೂಕ 43 ಗ್ರಾಂ ಮತ್ತು 2.86 ಲಕ್ಷ ರೂ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನಿರೀಕ್ಷಕ (ಎಸ್‌ಐ) ಸದಾಶಿವ ಗವರೋಜಿ ಮತ್ತು ತನಿಖಾ ಎಸ್‌ಐ ರಮೇಶ ಆರ್ ಪವಾರ ನೇತೃತ್ವದ ತಂಡ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರನ್ನು ಬಂಧಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿದರು.

ಕಾರ್ಯಾಚರಣೆಯಲ್ಲಿ ಪ್ರೊಬೇಷನರಿ ಎಸ್‌ಐಗಳಾದ ಚಂದ್ರಕಲಾ ಪತ್ತಾರ, ಜಯಶ್ರೀ ಹುನೂರ, ಎಎಸ್‌ಐ ಸುಧಾಕರ, ಶಿವಾನಂದ, ದಿನೇಶ, ನಿತಿನ್, ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ಸಂತೋಷಕುಮಾರ ಕೆ.ಯು, ಸಚಿನ್ ಶೆಟ್ಟಿ, ರಾಮ ಪೂಜಾರಿ, ರವಿ ನಾಯಿಕ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!