Friday, May 3, 2024
Homeಕರಾವಳಿರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು‌ ಯುವಕನ‌ ಮೆದುಳು ನಿಷ್ಕ್ರೀಯ: ಅಂಗಾಂಗ ದಾನ ಮಾಡಿದ ಪೋಷಕರು

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು‌ ಯುವಕನ‌ ಮೆದುಳು ನಿಷ್ಕ್ರೀಯ: ಅಂಗಾಂಗ ದಾನ ಮಾಡಿದ ಪೋಷಕರು

spot_img
- Advertisement -
- Advertisement -

ದೊಡ್ಡಬಳ್ಳಾಪುರ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು‌ ಯುವಕನ‌ ಮೆದುಳು ನಿಷ್ಕ್ರೀಯವಾದ ಹಿನ್ನೆಲೆ ಯುವಕನ ಅಂಗಾಂಗ ದಾನ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟದ‌ಲ್ಲಿ‌ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟದ‌ ನಿವಾಸಿ ಯುವಕ ಕೀರ್ತಿ(24)ಮೃತ ಯುವಕ.

ಕೀರ್ತಿ ವಿಜಯಪುರದಲ್ಲಿರುವ ಅಕ್ಕನ ಮನೆಗೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡ ಕೀರ್ತಿಗೆ ನವಚೇತನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಕೀರ್ತಿಯ ಮೆದುಳು ನಿಷ್ಕ್ರೀಯಗೊಂಡ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

ಮಗನ ಸಾವಿನ ದುಃಖದಲ್ಲೂ ಕುಟುಂಬಸ್ಥರು ಆತನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಮೃತ ಕೀರ್ತಿಯ ದೇಹದಿಂದ ಕಿಡ್ನಿ,ಹೃದಯ ಮತ್ತು ಕಣ್ಣುಗಳನ್ನು ತೆಗೆಯಲಾಗಿದೆ. ಮೂವರ ಬಾಳಿಗೆ ಕೀರ್ತಿ ಸಾವಿನಲ್ಲಿ ಬೆಳಕಾಗಿದ್ದಾರೆ.

- Advertisement -
spot_img

Latest News

error: Content is protected !!